Urdu   /   English   /   Nawayathi

ಎಲ್‌ಐಸಿ ನೌಕರನ ಮನೆ ಮೇಲೆ ಗುಂಡಿನ ದಾಳಿ

share with us

ಮಡಿಕೇರಿ: 31 ಜುಲೈ (ಫಿಕ್ರೋಖಬರ್ ಸುದ್ದಿ)ನಗರದ ಫೀ. ಮಾ. ಕಾರ್ಯಪ್ಪ ಕಾಲೇಜು ಹಿಂಭಾಗದಲ್ಲಿರುವ ಜೀವ ವಿಮಾ ನಿಗಮದ ಉದ್ಯೋಗಿ ಜನಾರ್ದನ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಜು. 30ರ ಬೆಳಗಿನ ಜಾವ 3 ಗಂಟೆಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಡ ಬಂದೂಕಿನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಶಬಟಛಿ ಕೇಳಿ ಎಚ್ಚರಗೊಂಡ ಜನಾರ್ದನ ಹೊರ ಬಂದು ಬೆಳಕು ಹಾಯಿಸಿದಾಗದುಷ್ರ್ಮಿಗಳು ಮತ್ತೂಂದು ಗುಂಡನ್ನು ಮನೆಯತ್ತ ಹಾರಿಸಿ ಸ್ಥಳದಿಂದ ಪರಾರಿಯಾದರು.

ಇದರಿಂದ ಕಿಟಕಿಯ ಗಾಜುಗಳು ಪುಡಿಯಾಗಿವೆ ಹಾಗೂ ಫ್ರೆàಮ್‌ಗಳಿಗೆ ಗುಂಡಿನ ಚೂರುಗಳು ಹೊಕ್ಕಿವೆ. ಜನಾರ್ದನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುಷ್ಕರ್ಮಿಗಳು ಗುಂಡನ್ನು ಯಾವ ಕಾರಣಕ್ಕೆ ಹಾರಿಸಿದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا