Urdu   /   English   /   Nawayathi

ಕರ್ನೂಲ್‌ನಲ್ಲಿ ಬಾಂಬ್‌ ಸ್ಫೋಟ: 3 ಉದ್ಯಮಿಗಳ ಸಾವು

share with us

ಕರ್ನೂಲ್: 31 ಜುಲೈ (ಫಿಕ್ರೋಖಬರ್ ಸುದ್ದಿ) ನಂದ್ಯಾಲ ಚೆಕ್‌ಪೋಸ್ಟ್‌ ಬಳಿಯ ರಿಯಲ್‌ ಎಸ್ಟೇಟ್‌ ಸೈಟ್‌ ಒಂದರಲ್ಲಿ ಪ್ರಬಲ ಬಾಂಬ್‌ ಸ್ಪೋಟಗೊಂಡ ಪರಿಣಾಮ ಮೂವರು ಉದ್ಯಮಿಗಳು ಮೃತಪಟ್ಟಿದ್ದಾರೆ. ಮಲ್ಲಿಕಾರ್ಜುನ್‌, ರಾಜಶೇಖರ್‌ ಹಾಗೂ ಶ್ರೀನಿವಾಸುಲು ಮೃತ ದುರ್ಧೈವಿಗಳು. 
ನಗರದ ವಿವಿಧ ಭಾಗಗಳಲ್ಲಿ ಹಲವಾರು ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದ ಉದ್ಯಮಿಗಳು, ಸ್ಥಳ ವೀಕ್ಷಣೆಗಾಗಿ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಯೋಜನೆ ಆರಂಭಕ್ಕೆ ಮುನ್ನ ಸ್ಥಳಕ್ಕೆ ಬಂದು, ಕೆಲಸಗಾರರಿಂದ ಸ್ವಚ್ಛಗೊಳಿಸಿದ್ದಾರೆ. ಈ ವೇಳೆ ಪ್ರಬಲ ಬಾಂಬ್‌ ಸ್ಪೋಟಗೊಂಡು ಮಲ್ಲಿಕಾರ್ಜುನ್‌ ಹಾಗೂ ರಾಜಶೇಖರ್‌ ಸ್ಥಳದಲ್ಲೇ ಮೃತಪಟ್ಟರೆ, ಶ್ರೀನಿವಾಸುಲು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವೇಳೆ ವಾಹನ ಚಾಲಕ ಸುಧಾಕರ್‌ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. 
ರಾಜಶೇಖರ್‌ ಹಾಗೂ ಮಲ್ಲಿಕಾರ್ಜುನ್‌ ಸಹೋದರರಾಗಿದ್ದು, ಶ್ರೀನಿವಾಸುಲು ಸೋದರ ಸಂಬಂಧಿ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا