Urdu   /   English   /   Nawayathi

ದಂಪತಿ ಮೇಲೆ ದಾಳಿ, ಮಗುವನ್ನು ಹೊತ್ತೊಯ್ದ ಚಿರತೆ..ಮುಂದೆನಾಯ್ತು?

share with us

ವಡೋದರಾ(ಗುಜರಾತ್): 30 ಜುಲೈ (ಫಿಕ್ರೋಖಬರ್ ಸುದ್ದಿ) 4 ತಿಂಗಳ ಮಗುವಿನ ಜೊತೆ ಬೈಕ್ ನಲ್ಲಿ ದಂಪತಿ ತೆರಳುತ್ತಿದ್ದ ಸಂದರ್ಭದಲ್ಲಿಯೇ ದಿಢೀರನೆ ಚಿರತೆಯೊಂದು ದಾಳಿ ನಡೆಸಿ, ಹಸುಗೂಸನ್ನು ಹೊತ್ತೊಯ್ದ  ಘಟನೆ ಛೋಟಾ ಉದಯ್ ಪುರ್ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದೆ. ವಿಕ್ರಮ್ ರಾತ್ವಾ,  ಪತ್ನಿ ಸಪ್ನಾ ಹಾಗೂ ನಾಲ್ಕು ತಿಂಗಳ ಪುಟ್ಟ ಮಗುವಿನ ಜೊತೆ ಬೈಕ್ ನಲ್ಲಿ ಭಾನುವಾರ ಹೋಗುತ್ತಿದ್ದ ವೇಳೆ ಛೋಟಾ ಉದಯ್ ಪುರ್ ಜಿಲ್ಲೆಯ ರಾಯ್ ಪುರ್ ಗ್ರಾಮದ ಸಮೀಪ ಪಾವಿ ಜೆಟ್ ಪುರ್ ಟೆಹ್ಸಿಲ್ ನಲ್ಲಿ ಚಿರತೆ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆ ದಾಳಿ ನಡೆಸಿ ಸಪ್ನಾ ಅವರ ಕೈಯಲ್ಲಿದ್ದ ಗಂಡು ಮಗು ಆಯುಷ್ಯನನ್ನು ಹೊತ್ತೊಯ್ದಿರುವುದಾಗಿ ಪತಿ ರಾತ್ವಾ ಪಿಟಿಐಗೆ ವಿವರಿಸಿದ್ದಾರೆ. ಈ ವೇಳೆ ನೆರವಿಗಾಗಿ ಕೂಗಿಕೊಂಡಾಗ ಸ್ಥಳೀಯ ಗ್ರಾಮಸ್ಥರು ಆಗಮಿಸಿದ್ದರು.

ಕೊನೆಗೆ ಸ್ಥಳೀಯರು ಚಿರತೆಯನ್ನು ಬೆದರಿಸಿ ಅದರ ಹಿಡಿತದಲ್ಲಿದ್ದ ಮಗುವನ್ನು ತಪ್ಪಿಸಲು ಯಶಸ್ವಿಯಾಗಿದ್ದರು. ಬಳಿಕ ಗಾಯಗೊಂಡಿದ್ದ ಪತ್ನಿ ಸಪ್ನಾ, ಮಗು ಆಯುಷ್ಯ ಸೇರಿದಂತೆ ಮೂವರನ್ನು ವಡೋದರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಬೆನ್ನು ಹಾಗೂ ಕಾಲು ತೀವ್ರವಾಗಿ ಗಾಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا