Urdu   /   English   /   Nawayathi

ವಿಟ್ಲ: ಗೋಸಾಗಾಟ ನಡೆಸುತ್ತಿದ್ದ ಬಿ,ಜೆ,ಪಿ ಮುಖಂಡನ ಸೆರೆ

share with us

ವಿಟ್ಲ: 28 ಜುಲೈ (ಫಿಕ್ರೋಖಬರ್ ಸುದ್ದಿ) ವಿಟ್ಲದ ಬಿ,ಜೆ,ಪಿಯ ಮುಖಂಡ ಪಡ್ನೂರು ಗ್ರಾಮ ಪಡಾರುವಿನ ನಿವಾಸಿ ಕೃಷ್ಣ ಭಟ್ ಅವರ ಪುತ್ರ ಶಶಿಕುಮಾರ್(48) ಹಾಗೂ ಕಟ್ಟತ್ತಿಲ ಮಣ್ಣಗದ್ದೆಯ ನಿವಾಸಿ ಮುಹಮ್ಮದ್ ಅವರ ಪುತ್ರ ಅಬ್ದುಲ್ ಹ್ಯಾರಿಸ್(21) ಇವರಿಬ್ಬರೂ ವಿಟ್ಲದಿಂದ ಕೇರಳದ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಪೋಲೀಸರ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಅಕ್ರಮವಾಗಿ ಗೋಸಾಗಾಟ ನಡೆಸುವ ಮಾಹಿತಿಯನ್ನು ಪರಿವಾರದ ಕಾರ್ಯಕರ್ತರು ಪೋಲೀಸರಿಗೆ ತಿಳಿಸಿದ ತಕ್ಷಣ ವಿಟ್ಲ ಪೋಲೀಸರ ತಂಡ ಗುರುವಾದಂದು ರಾತ್ರಿ ವಿಟ್ಲ ಜಂಕ್ಷನ್ನಿನ ರಸ್ತೆಯಲ್ಲಿ ಇವರಿಗಾಗಿ ಕಾಯುತ್ತಿರುವ ವೇಳೆ ವಾಹನವನ್ನು ನಿಲ್ಲಿಸದೇ ಅತಿವೇಗದಲ್ಲಿ ಚಲಿಸಿ ಹೋಗುವಾಗ ಪೋಲೀಸರು ಸಾಲೆತ್ತೂರು ರಸ್ತೆಯಲ್ಲಿ ಹಿಂಬಾಲಿಸಿ ಕಡಂಬು ಜಂಕ್ಷನ್ನಿನಲ್ಲಿ ಇವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಶಶಿಕುಮಾರ್ ವಿಟ್ಲ ಬಿ,ಜೆ,ಪಿಯ ಮುಖಂಡನಲ್ಲದೇ ಕೆಲವು ದಿನಗಳ ಹಿಂದೆ ಕೋಟಿ ನಗರದಲ್ಲಿ ನಡೆದ “ಗೋ ಹಂತಕರ ವಿರುದ್ಧ ಕ್ರಮ” ಎಂಬ ಉಪವಾಸ ಸತ್ಯಾಗ್ರಹದ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. 
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا