Urdu   /   English   /   Nawayathi

ಕಣಿವೆಗೆ ಉರುಳಿದ ಪ್ರವಾಸಿಗರ ಬಸ್: ಒಂದೆ ಸಂಸ್ಥೆಯ 33 ಮಂದಿ ದಾರುಣ ಸಾವು

share with us

ಮುಂಬೈ: 28 ಜುಲೈ (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಮಹಾಬಲೇಶ್ವರಕ್ಕೆ ಹೊರಟಿದ್ದ ಪ್ರವಾಸಿಗಳ ಬಸ್ ಒಂದು ಕಣಿವೆಗೆ ಬಿದ್ದು ಬಸ್‌ನಲ್ಲಿದ್ದ 34 ಮಂದಿ ಪ್ರವಾಸಿಗಳ ಪೈಕಿ 33 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಬಸ್ 300 ಅಡಿ ಆಳದ ಕಣಿವೆಗೆ ಬಿದ್ದಿದ್ದು ಬಸ್‌ನಲ್ಲಿ ಜೀವಂತವಾಗಿ ಉಳಿದ ಪ್ರಯಾಣಿಕರೊಬ್ಬರು ಹೊರಬಂದು ತನ್ನ ಸಂಬಂಧಿಗಳಿಗೆ ಕರೆ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ದಪೊಲಿಯ ಕೃಷಿ ವಿಶ್ವವಿದ್ಯಾಲಯದ 34 ಮಂದಿಯ ತಂಡ ಇಂದು ಮಹಾಬಲೇಶ್ವರಕ್ಕೆ ಪ್ರಯಾಣ ಬೆಳೆಸಿತ್ತು. ರಾಯಗಡ್ ಜಿಲ್ಲೆಯ ಅಂಬೆನಲಿ ಘಾಟ್ ಮೂಲಕ ಸಾಗುತ್ತಿದ್ದಾಗ ಬಸ್ ನಿಯಂತ್ರಣ ತಪ್ಪಿ 300 ಅಡಿ ಆಳಕ್ಕೆ ಬಿದ್ದಿದೆ.

ದುರಂತಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಆಘಾತ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಚಾರಣಿಗರು ಪೊಲೀಸರಿಗೆ ಸಹಾಯ ಮಾಡುತ್ತಿದ್ದು ರಾಷ್ಟ್ರೀಯ ಪ್ರಕೃತಿ ವಿಕೋಪ ದಳ (ಎನ್‌ಡಿಆರ್‌ಎಫ್) ಸ್ಥಳಕ್ಕೆ ಧಾವಿಸಿದೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا