Urdu   /   English   /   Nawayathi

ಮ್ಯಾನ್‌ಮಾರ್‌: ಹರಳಿನ ಗಣಿಯಲ್ಲಿ ಭೂಕುಸಿತ; 27 ಕಾರ್ಮಿಕರ ಸಾವು

share with us

ಯಾಂಗೂನ್‌: 25 ಜುಲೈ (ಫಿಕ್ರೋಖಬರ್ ಸುದ್ದಿ) ಉತ್ತರ ಮ್ಯಾನ್‌ಮಾರ್‌ ನ ಪಚ್ಚೆ ಹರಳು ಗಣಿಯೊಂದರಲ್ಲಿ ಸಂಭವಿಸಿದ ಭೂಕುಸಿತಕ್ಕೆ 27 ಮಂದಿ ಬಲಿಯಾಗಿರುವುದಾಗಿ ಭೀತಿ ಪಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಣಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಗಣಿಯೊಳಗೆ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಉತ್ತರ ಮ್ಯಾನ್‌ಮಾರ್‌ನ ಕಚಿನ್‌ ರಾಜ್ಯದಲ್ಲಿನ ಅತ್ಯಂತ ದುರ್ಗಮ ಪ್ರದೇಶದಲ್ಲಿರುವ ಅಮೂಲ್ಯ ಹರಳಿನ ಗಣಿಗಳು ಬಿಲಿಯಗಟ್ಟಲೆ ಡಾಲರ್‌ಗಳ, ಭ್ರಷ್ಟಾಚಾರದಿಂದ ತುಂಬಿರುವ, ಉದ್ಯಮವಾಗಿದೆ. ಇಲ್ಲಿನ ಗಣಿಗಳಲ್ಲಿನ ಕಾರ್ಮಿಕ ಸುರಕ್ಷೆ ಅತ್ಯಂತ ಕಳಪೆಯಾಗಿವೆ.

ಈ ಗಣಿಗಳಲ್ಲಿ ಅತ್ಯಂತ ಬಡ ಜನಾಂಗೀಯ ಸಮುದಾಯದ ಕಾರ್ಮಿಕರು ದುಡಿಯುತ್ತಾರೆ ಮತ್ತು ಪದೇ ಪದೇ ಸಂಭವಿಸುವ ದುರಂತಗಳಿಗೆ ಬಲಿಯಾಗುತ್ತಿರುತ್ತಾರೆ ಎಂದು ವರದಿಗಳು ತಿಳಿಸಿವೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا