Urdu   /   English   /   Nawayathi

‘ಗೋಮಾಂಸ ತಿನ್ನುವುದನ್ನು ಬಿಟ್ಟರೆ ದೇಶದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತೆ’

share with us

ರಾಂಚಿ: 24 ಜುಲೈ (ಫಿಕ್ರೋಖಬರ್ ಸುದ್ದಿ) ದೇಶದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಬೇಕಾದರೆ ಗೋಮಾಂಸ ತಿನ್ನುವ ಪದ್ದತಿ ನಿಲ್ಲಬೇಕು. ಗೋ ಹತ್ಯೆ ನಿಂತರೆ ಗುಂಪು ಥಳಿತ ಪ್ರಕರಣಗಳು ತಾವಾಗಿಯೇ ನಿಲ್ಲುತ್ತವೆ ಎಂದು ಆರ್‍ಎಸ್‍ಎಸ್ ನಾಯಕ ಹಾಗೂ ಕಾರ್ಯಕಾರಣಿ ಸದಸ್ಯ ಇಂದ್ರೇಶ್ ಕುಮಾರ್ ಹೇಳಿದ್ದಾರೆ. ಹಿಂದೂ ಜಾಗರಣ ಮಂಚದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಹತ್ಯೆಯನ್ನು ಯಾವ ಧರ್ಮದಲ್ಲೂ ಸಮರ್ಥಿಸುವುದಿಲ್ಲ. ಏಸು ಕ್ರಿಸ್ತ ದೊಡ್ಡಿಯಲ್ಲಿ ಜನ್ಮ ತಾಳಿದರು. ಅದೇ ಕಾರಣದಿಂದ ಗೋವನ್ನು ‘ಮಾತೆ’ ಎನ್ನಲಾಗುತ್ತದೆ. ಮಕ್ಕಾ-ಮದೀನಾಗೆ ಹೋದರೆ ಅಲ್ಲಿ ಕೂಡ ಗೋ ಹತ್ಯೆಯನ್ನು ಅಪರಾಧವೆಂದು ಪರಿಗಣಿಸುತ್ತಾರೆ ಎಂದರು.

ಗೋ ಹತ್ಯೆಯ ಪಾಪದಿಂದ ಮುಕ್ತಗೊಂಡರೆ ಗುಂಪು ಥಳಿತ ಸಮಸ್ಯೆಗಳಿಗೂ ಪರಿಹಾರ ದೊರೆಯುವುದು. ಅಮಾಯಕರನ್ನು ಸಾಯಿಸುವ ಗುಂಪು ಸೈತಾನನ ಅಪರಾಧಗಳನ್ನು ನಿಲ್ಲಿಸಲು ಗೋಮಾಂಸ ತಿನ್ನುವ ಪದ್ಧತಿಯನ್ನು ನಿಲ್ಲಿಸಬೇಕು ಎಂದರು. ರಾಜಸ್ಥಾನದ ಆಳ್ವಾರ್ ಎಂಬಲ್ಲಿ ಕಳೆದ ಶುಕ್ರವಾರ ಮುಸ್ಲಿಂ ಯುವಕನೊಬ್ಬ ಗುಂಪು ಥಳಿತಕ್ಕೊಳಗಾಗಿ ಸಾವಿಗೀಡಾದ ಘಟನೆಯ ಹಿನ್ನೆಲೆಯಲ್ಲಿ ಇಂದ್ರೇಶ್ ಕುಮಾರ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.  ಇತ್ತೀಚೆಗೆ ನಡೆದ ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿಯನ್ನು ಖಂಡಿಸಿದ ಅವರು, ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೊಬ್ಬರ ಭಾವನೆಗಳನ್ನು ನೋಯಿಸುವ ಅಧಿಕಾರ ಯಾರಿಗೂ ಇಲ್ಲ. ಹಾಗೆಯೇ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸುವವರನ್ನು ದಂಡಿಸುವುದು ತಪ್ಪು ಎಂದು ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا