Urdu   /   English   /   Nawayathi

ರಾಹುಲ್‌ಗೆ ಪ್ರಧಾನಿ ಕುರ್ಚಿ ಬಿಟ್ರೆ ಬೇರೇನೂ ಕಾಣುವುದಿಲ್ಲ:ಮೋದಿ ಕಿಡಿ

share with us

ಶಹಜಾನ್‌ಪುರ್‌: 21 ಜುಲೈ (ಫಿಕ್ರೋಖಬರ್ ಸುದ್ದಿ) ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಪ್ರಧಾನಿ ಕುರ್ಚಿಯೊಂದು ಬಿಟ್ಟು ಬೇರೇನೂ ಕಾಣುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.  ಶನಿವಾರ ಶಹಜಾನ್‌ಪುರದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ ರಾಹುಲ್‌ ವಿರುದ್ಧ ಕಿಡಿ ಕಾರಿದರು. ನಾವು ವಿಪಕ್ಷಗಳ ಬಳಿ ನಮ್ಮ ಸರ್ಕಾರದ ಕುರಿತು ವಿಶ್ವಾಸವಿಲ್ಲ ಯಾಕೆ ಎಂದು ಪ್ರಶ್ನಿಸಿದ್ದೇವು. ಅವರಿಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ ಕೊನೆಗೆ ಬಂದು ಆಲಿಂಗನ ಮಾಡಿದರು ಎಂದರು.  ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇನೆ ಇದು ನನ್ನ ದೊಡ್ಡ ಅಪರಾಧ ಎಂದರು. 

ನೀವೆಲ್ಲಾ ನೋಡಿದ್ದೀರಲ್ಲಾ  ರಾಹುಲ್‌ ಹೇಗೆ ನನ್ನ ಕುರ್ಚಿಯತ್ತ ಓಡಿ ಬಂದರು ಎಂದು.ಅವರಿಗೆ ಪ್ರಧಾನಿ ಕುರ್ಚಿ ಬಿಟ್ಟರೆ ಬೇರೆ ಏನೂ ಕಾಣುತ್ತಿಲ್ಲ ಎಂದರು. 

ರೈತರ ಹೆಸರಿನಲ್ಲಿ ಈಗ ಮೊಸಳೆ ಕಣ್ಣೀರು ಹಾಕುತ್ತಿರುವವರು ಅಧಿಕಾರದಲ್ಲಿದ್ದಾಗ ರೈತರಿಗೆ ಏನಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا