Urdu   /   English   /   Nawayathi

ದೆಹಲಿ ಆಯ್ತು, ಜಾರ್ಖಂಡ್‌ನ‌ಲ್ಲಿ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ

share with us

ಹಝಾರಿಬಾಗ್‌: 15 ಜುಲೈ (ಫಿಕ್ರೋಖಬರ್ ಸುದ್ದಿ) ದೆಹಲಿಯ ಬುರಾರಿಯಲ್ಲಿ  ಒಂದೇ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಜಾರ್ಖಂಡ್‌ನ‌ ಹಝಾರಿಬಾಗ್‌ನ ಮನೆಯಲ್ಲಿ ಒಂದೇ ಕುಟುಂಬದ 6 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮಾರ್ವಾಡಿ ಕುಟುಂಬದ 6 ಮಂದಿ ಸಾವಿಗೆ ಶರಣಾಗಿದ್ದಾರೆ. ಓರ್ವ ಪುರುಷ , ಇಬ್ಬರು ಮಹಿಳೆಯರು ಮತ್ತಿಬ್ಬರು ಮಕ್ಕಳು ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಬಳಿಕ ಇನ್ನೋರ್ವ  ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ. 

ಮೃತರು 70 ರ ಹರೆಯದ ಮಹಾವೀರ್‌ ಮಹೇಶ್ವರಿ,ಪತ್ನಿ ಕಿರಣ್‌, ಮಗ 40 ರ ನರೇಶ್‌ ಅಗರ್‌ವಾಲ್‌, ಪತ್ನಿ 38 ರ ಹರೆಯದ ಪ್ರೀತಿ ಮಕ್ಕಳಾದ ಅಮನ್‌(8) ಮತ್ತು ಅಂಜಲಿ(6)ಸಾವನ್ನಪ್ಪಿದವರು. 

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ,ಡೆತ್‌ ನೋಟ್‌ ಪತ್ತೆಯಾಗಿದೆ. ವಿಪರೀತ ಸಾಲ ಇದ್ದ ಕಾರಣಕ್ಕೆ ಕಂಗೆಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا