Urdu   /   English   /   Nawayathi

ಹಿಂದೂ ಪಾಕಿಸ್ಥಾನ: ಕೋಲ್ಕತದಲ್ಲಿ ತರೂರ್‌ ವಿರುದ್ಧ ಕೇಸು

share with us

ಕೋಲ್ಕತ: 14 ಜುಲೈ (ಫಿಕ್ರೋಖಬರ್ ಸುದ್ದಿ) ಹಿಂದೂ ಪಾಕಿಸ್ಥಾನ ಹೇಳಿಕೆಗಾಗಿ ಹಿರಿಯ ಕಾಂಗ್ರೆಸ್‌ ನಾಯಕ, ತಿರುವನಂತಪುರ ಸಂಸದ, ಶಶಿ ತರೂರ್‌ ವಿರುದ್ಧ  ಇಲ್ಲಿನ ನ್ಯಾಯವಾದಿ ಸುಮೀತ್‌ ಚೌಧರಿ ಎಂಬವರು ಕೇಸು ದಾಖಲಿಸಿದ್ದಾರೆ. ಆ ಪ್ರಕಾರ ಟ್ವಿಟರ್‌ ಮೂಲಕ ತರೂರ್‌ ಗೆ ಸಮನ್ಸ್‌ ಜಾರಿಯಾಗಿದೆ. 

ಹಿಂದೂ ಪಾಕಿಸ್ಥಾನ ಹೇಳಿಕೆ ನೀಡುವ ಮೂಲಕ ತರೂರ್‌ ಅವರು ದೇಶದ ಜನರ ಧಾರ್ಮಿಕ ಭಾವನೆಯನ್ನು ನೋಯಿಸಿದ್ದಾರೆ ಮತ್ತು ದೇಶದ ಜಾತ್ಯತೀತ ಸ್ವರೂಪವನ್ನು ವಿಕೃತಗೊಳಿಸಿದ್ದಾರೆ‌' ಎಂದು ದೂರಿನಲ್ಲಿ ಹೇಳಲಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬಂದರೆ ಹಿಂದೂ ಪಾಕಿಸ್ಥಾನ ನಿರ್ಮಾಣವಾಗುವ ಅಪಾಯವಿದೆ; ಬಿಜೆಪಿಯವರು ದೇಶದ ಸಂವಿಧಾನವನ್ನು ಹರಿದು ಹಾಕಿ ತಮ್ಮದೇ ಆದ ಹೊಸ ಸಂವಿಧಾನವನ್ನು ರೂಪಿಸಲಿದ್ದಾರೆ ಎಂದು ಶಶಿ ತರೂರ್‌ ಬಹಿರಂಗ ಹೇಳಿಕೆ ನೀಡಿದ್ದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا