Urdu   /   English   /   Nawayathi

ಹೂವಿನ ಮಾರುಕಟ್ಟೆಯ ಬಳಿ ಕೇವಲ ದ್ವಿಚಕ್ರ ವಾಹನ ಸಂಚಾಲನೆಗೆ ಆಗ್ರಹ

share with us

ಭಟ್ಕಳ: 11 ಜುಲೈ (ಫಿಕ್ರೋಖಬರ್ ಸುದ್ದಿ) ಭಟ್ಕಳದ ಹೂವಿನ ಮಾರುಕಟ್ಟೆ ನೆಹರು ರಸ್ತೆಯ ಏಕ ಮುಖ ಸಂಚಾರದಲ್ಲಿ ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರದ ಅವಕಾಶ ಮಾಡಿಕೊಡಬೇಕೆಂದು ಹೂವಿನ ಮಾರುಕಟ್ಟೆಯ ವ್ಯಾಪಾರಸ್ಥರು ತಾಲೂಕಿನ ಡಿ,ವೈ,ಎಸ್,ಪಿ ಡಿಸೌಜಾ ಅವರಿಗೆ ಮನವಿ ಸಲ್ಲಿಸಿದರು. ವಾಹನಗಳ ಸಂಚಾರದಿಂದ ವ್ಯಾಪಾರದ ವಹಿವಾಟಿಗೆ ತೊಂದರೆಯಾಗುತ್ತಿದ್ದು, ರಸ್ತೆಯಲ್ಲಿ ಕೇವಲ ದ್ವಿಚಕ್ರ ವಾಹನಗಳು ಸಂಚಾರ ನಡೆದರೆ ಉತ್ತಮವಾಗಿರುತ್ತದೆ ಎಂದು ಮನವಿ ಮಾಡಿಕೊಂಡರು. ಮನವಿ ಮಾಡಿಕೊಳ್ಳುವ ವೇಳೆ ಕಚೇರಿಯಲ್ಲಿ ವಿಠ್ಠಲದಾಸ ಬಾಳಿಗ, ವಿಠ್ಠೋಬ್ ಪ್ರಭು, ರಾಜೇಶ್ ಕಾಮತ್, ನಾರಾಯಣ ಶಾನಬಾಗ್, ಸುಬ್ರಾಯ ದೇವಾಡಿಗ, ಗಣಪತಿ ನಾಯ್ಕ್ ಹಾಗೂ ಮುಂತಾದ ವ್ಯಾಪಾರಸ್ಥರು ಇದ್ದರು.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا