Urdu   /   English   /   Nawayathi

ಒತ್ತಡಕ್ಕೆ ಮಣಿದ ಕಾಂಗ್ರೆಸ್‌: ಕೇರಳ ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ

share with us

ಕೋಟ್ಟಯಂ: 09 ಜೂನ್ (ಫಿಕ್ರೋಖಬರ್ ಸುದ್ದಿ) ಹಲವು ದಿನಗಳ ಸಭೆ, ಚರ್ಚೆಯ ಬಳಿಕ ಕೇರಳ ಕಾಂಗ್ರೆಸ್‌ ಎಂ ನಿನ್ನೆ ಶುಕ್ರವಾರ ತಡರಾತ್ರಿ ತನ್ನ ನಾಯಕ ಜೋಸ್‌ ಕೆ ಮಾಣಿ ಅವರನ್ನು ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮೋಕ್ರಾಟಿಕ್‌ ಫ್ರಂಟ್‌ (ಯುಡಿಎಫ್)ನ ರಾಜ್ಯಸಭಾ ಚುನಾವಣಾ ಅಭ್ಯರ್ಥಿ ಎಂದು ಪ್ರಕಟಿಸಿದೆ.

ಕೇರಳ ಕಾಂಗ್ರೆಸ್‌ ಎಂ ಪಕ್ಷದ ಎರಡನೇ ಕ್ರಮಾಂಕದ ನಾಯಕರಾಗಿರುವ ಪಿ ಜೆ ಜೋಸೆಫ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ "ಜೋಸ್‌ ಕೆ ಮಾಣಿ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ' ಎಂದು ಹೇಳಿದರು.

ಕೋಟ್ಟಯಂ ಸಮೀಪದ ಪಾಲಾ ಎಂಬಲ್ಲಿ ನಿನ್ನೆ ಶುಕ್ರವಾರ ತಡರಾತ್ರಿ ನಡೆದಿದ್ದ ಕೇರಳ ಕಾಂಗ್ರೆಸ್‌ ಎಂ ನಾಯಕರ ಸಭೆಯಲ್ಲಿ ಜೋಸ್‌ ಕೆ ಮಾಣಿ ಅವರನ್ನು ಮೇಲ್ಮನೆ ಅಭ್ಯರ್ಥಿಯಾಗಿ ನಿಲ್ಲಿಸುವ ನಿರ್ಧಾರವನ್ನು ಕೈಗೊಂಡಿತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا