Urdu   /   English   /   Nawayathi

ಚಾಲಕನ ಸಮಯ ಪ್ರಜ್ಞೆ: ಪ್ರಯಾಣಿಕರು ಪಾರು

share with us

ಮಡಿಕೇರಿ: 04 ಜೂನ್ (ಫಿಕ್ರೋಖಬರ್ ಸುದ್ದಿ) ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಸಮಯ ಪ್ರಜ್ಞೆ ತೋರಿದ ಪರಿಣಾಮ ಪ್ರಯಾಣಿಕರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸುಬ್ರಹ್ಮಣ್ಯದಿಂದ ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ ಸೋಮವಾರ ಬೆಳಿಗ್ಗೆ ಬಸ್ಸು ತೆರಳುತ್ತಿತ್ತು. ಕೊಡಗು ಜಿಲ್ಲೆಯ ಗಡಿಗ್ರಾಮ ಸಂಪಾಜೆ ಸಮೀಪದ ಕೊಯಿನಾಡು ಬಳಿ ಅಡ್ಡಾದಿಡ್ಡಿಯಾಗಿ ಬಂದ ಟ್ಯಾಂಕರ್‌ವೊಂದು, ಬಸ್ಸಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ಚಾಲಕ ಬಸ್ಸನ್ನು ರಸ್ತೆ ಬದಿಗೆ ಚಲಾಯಿಸಿದ್ದಾನೆ. ರಸ್ತೆ ಬದಿಯಲ್ಲಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಬಸ್ಸು ಹಾಗೂ ಟ್ಯಾಂಕರ್‌ ನಡುವೆ ಮುಖಾಮುಖಿ ಸಂಭವಿಸಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆಯಿತ್ತು. 30ರಿಂದ 35 ಮಂದಿ ಬಸ್ಸಿನಲ್ಲಿದ್ದರು. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا