Urdu   /   English   /   Nawayathi

ಗೌರಿ ಹತ್ಯೆ ಆರೋಪಿಗೂ ನಮ್ಮ ಸಂಸ್ಥೆಗೂ ಸಂಬಂಧವಿಲ್ಲ

share with us

ಪುಣೆ: 03 ಜೂನ್ (ಫಿಕ್ರೋಖಬರ್ ಸುದ್ದಿ) ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಗುರುವಾರ ಬಂಧಿತನಾದ ಅಮೋಲ್‌ ಕಾಳೆ (40)ಗೂ ನಮ್ಮ ಸಂಸ್ಥೆಗೂ ಸಂಬಂಧವಿಲ್ಲ ಎಂದು ಪುಣೆಯ ಹಿಂದೂ ಜನಜಾಗೃತಿ ಸಮಿತಿ(ಎಚ್‌ಜೆಎಸ್‌) ಶನಿವಾರ ಸ್ಪಷ್ಟಪಡಿಸಿದೆ.

ಅಮೋಲ್‌ ಕಾಳೆ 2008ರವರೆಗೆ ನಮ್ಮ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದ. ಬಳಿಕ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಸಂಸ್ಥೆಯನ್ನು ತೊರೆದಿದ್ದ ಎಂದು ಎಚ್‌ಜೆಎಸ್‌ ರಾಷ್ಟ್ರೀಯ ವಕ್ತಾರ ರಮೇಶ್‌ ಶಿಂದೆ ಹೇಳಿದ್ದಾರೆ. ಕಳೆದ 10 ವರ್ಷಗಳಿಂದಲೂ ಆತ ನಮ್ಮ ಸಂಸ್ಥೆಯ ಯಾವುದೇ ಚಟುವಟಿಕೆಗಳಲ್ಲೂ ಪಾಲ್ಗೊಂಡಿಲ್ಲ ಎಂದೂ ತಿಳಿಸಿದ್ದಾರೆ.

ಇದೇ ವೇಳೆ, ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪುಣೆಯ ಡಿಸಿಪಿ ಗಣೇಶ್‌ ಶಿಂದೆ, "ಕಾಳೆಯನ್ನು ಮೊದಲು ಕೊಲೆ ಯತ್ನ, ಕ್ರಿಮಿನಲ್‌ ಸಂಚು ಮತ್ತು ಶಸ್ತ್ರಾಸ್ತ್ರ ಕಾಯ್ದೆಯನ್ವಯ ಮೇ 21ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಮೇ 23ರಂದು ಕರ್ನಾಟಕ ಪೊಲೀಸರು ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನ‌ಲ್ಲಿರುವ ಕಾಳೆಯ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದರು.

ಮೇ 31ರಂದು ಗೌರಿ ಹತ್ಯೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಯಿತು' ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆತ ಪಿಂಪ್ರಿ-ಚಿಂಚ್‌ವಾಡ್‌ನ‌ಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ, ಮಗ ಮತ್ತು ತಾಯಿಯೊಂದಿಗೆ ವಾಸಿಸುತ್ತಿದ್ದ. ಆತನ ಬಂಧನ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪತ್ನಿ ನಿರಾಕರಿಸಿದ್ದಾಳೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا