Urdu   /   English   /   Nawayathi

ಇಂಧನ ಖಾತೆಗಾಗಿ ಜಟಾಪಟಿ ನಡೆದಿಲ್ಲ; ಖಾತೆ ಹಂಚಿಕೆಯಲ್ಲಿ ದೇವೇಗೌಡರ ಹಸ್ತಕ್ಷೇಪ ಇಲ್ಲ: ಕುಮಾರಸ್ವಾಮಿ

share with us

ಬೆಂಗಳೂರು: 02 ಜೂನ್ (ಫಿಕ್ರೋಖಬರ್ ಸುದ್ದಿ) ‘ಇಂಧನ ಖಾತೆಗಾಗಿ ಜಟಾಪಟಿ ನಡೆದಿದೆ ಎಂಬುದು ಸುಳ್ಳು. ಡಿ.ಕೆ.ಶಿವಕುಮಾರ್‌ ಮತ್ತು ರೇವಣ್ಣ ಇಬ್ಬರೂ ಇಂಧನ ಖಾತೆ ಕೇಳಿದ್ದರು, ಆದರೆ ಇಂಧನ ಖಾತೆಗಾಗಿ ಯಾವುದೇ ಜಟಾಪಟಿ ನಡೆದಿಲ್ಲ’ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಇಂಧನ ಖಾತೆಯನ್ನು ಡಿ.ಕೆ.ಶಿವಕುಮಾರ್‌ಗೆ ತಪ್ಪಿಸಲು ದೇವೇಗೌಡರು ಮಾಸ್ಟರ್‌ ಪ್ಲಾನ್‌ ಮಾಡಿದ್ದರೆಂಬುದು ಸುಳ್ಳು. ದೇವೇಗೌಡರು ಖಾತೆ ಹಂಚಿಕೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಈ ಹಿಂದೆ ರೇವಣ್ಣ ಹಾಗೂ ಶಿವಕುಮಾರ್‌ ಕೂಡ ಇಂಧನ ಸಚಿವರಾಗಿದ್ದರು. ಹಾಗಾಗಿ ಇಂಧನ ಖಾತೆ ಬೇಕು ಎಂದು ಇಬ್ಬರೂ ಕೇಳಿದ್ದು ನಿಜ’ ಎಂದರು.

‘ಹಣಕಾಸು ಖಾತೆಯನ್ನು ನಾನು ಕೇಳಿದ್ದು ನಿಜ. ಸಮ್ಮಿಶ್ರ ಸರ್ಕಾರದಲ್ಲಿ ಕೊಡು-ಕೊಳ್ಳುವಿಕೆ ನೀತಿಯನ್ವಯ ಖಾತೆ ಹಂಚಿಕೆಯಾಗಿದೆ. ಕಾವೇರಿ ನದಿ ಪ್ರಾಧಿಕಾರದ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗೆ ಕಾನೂನು ತಜ್ಞರು ಮತ್ತು ಅಧಿಕಾರಿಗಳ ಸಭೆ ಕರೆದಿದ್ದೇನೆ. ಕಾವೇರಿ ನದಿ ಪ್ರಾಧಿಕಾರದ ಬಗ್ಗೆ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಚರ್ಚಿಸಿದ ಬಳಿಕ ರಾಜ್ಯ ಸರ್ಕಾರದ ನಿಲುವು ಪ್ರಕಟಿಸುತ್ತೇವೆ’ ಎಂದು ಹೇಳಿದರು.

‘ಹೊಸ ಸರ್ಕಾರ ಬಂದಿರುವುದರಿಂದ ಹೊಸ ಬಜೆಟ್‌ ಮಂಡಿಸಬೇಕು. ಜಂಟಿ ಅಧಿವೇಶನ ಕರೆಯಬೇಕು. ಮೂರು–ನಾಲ್ಕು ದಿನಗಳಲ್ಲಿ ಬಜೆಟ್‌ ಸಿದ್ಧತಾ ಸಭೆಗಳನ್ನು ನಡೆಸುತ್ತೇವೆ ಹಾಗೂ ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ಮುಂದುವರಿಸುತ್ತೇವೆ’ ಎಂದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا