Urdu   /   English   /   Nawayathi

ಅರಬ್ಬಿ ಸಮುದ್ರದಲ್ಲಿ ದೋಣಿ ಮುಳುಗಡೆ; ಮೀನುಗಾರರ ರಕ್ಷಣೆ

share with us

ಕಾರವಾರ: 29 ಮೇ (ಫಿಕ್ರೋಖಬರ್ ಸುದ್ದಿ) ಮೀನುಗಾರಿಕೆ ನಡೆಸಿ ತಮಿಳುನಾಡಿಗೆ ಮಂಗಳವಾರ ವಾಪಸಾಗುತ್ತಿದ್ದ ಮೀನುಗಾರಿಕಾ ದೋಣಿಯೊಂದು ಕಡಲ ಕಿನಾರೆಯಿಂದ ಸುಮಾರು 21 ನಾಟಿಕಲ್ ಮೈಲು (ಸುಮಾರು 39 ಕಿ.ಮೀ) ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಇನ್ನೊಂದು ದೋಣಿ ಭಾಗಶಃ ಮುಳುಗಿದೆ.

ದೋಣಿಗಳನ್ನು ತಮಿಳುನಾಡಿನ ಮೀನುಗಾರರಿಗೆ ಸೇರಿದ ‘ಏಂಜೆಲ್ 1’ ಮತ್ತು ‘ಏಂಜೆಲ್ 2’ ಎಂದು ಗುರುತಿಸಲಾಗಿದೆ. ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಗಳಿಗೆ ಹಾನಿಯಾಗಿರುವ ಕಾರಣ ಅವಘಡ ನಡೆದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಸಂತೋಷ್ ಕೊಪ್ಪದ, ‘ಎರಡು ದೋಣಿಗಳಲ್ಲಿ ಆರು ಮೀನುಗಾರರು ಪ್ರಯಾಣಿಸುತ್ತಿದ್ದರು. ಅವರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಇಬ್ಬರಿಗೆ ಹುಡುಕಾಟ ಮುಂದುವರಿದಿದೆ. ಒಂದು ದೋಣಿ ಸಂಪೂರ್ಣ ಮುಳುಗಿದೆ. ಮತ್ತೊಂದು ಸಮುದ್ರ ಮಧ್ಯದಲ್ಲಿ ನಿಂತಿದೆ’ ಎಂದು ತಿಳಿಸಿದ್ದಾರೆ.

ಕರಾವಳಿ ರಕ್ಷಣಾ ಪಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಸ್ಥಳೀಯ ಮೀನುಗಾರರೂ ಸಂಕಷ್ಟದಲ್ಲಿರುವವರ ರಕ್ಷಣೆಗೆ ಧಾವಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا