Urdu   /   English   /   Nawayathi

ಕರ್ನಾಟಕ ಬಂದ್‌ಗೆ ಅವಕಾಶ ನೀಡದಂತೆ ಕಾಂಗ್ರೆಸ್‌ ಮನವಿ

share with us

ಬೆಂಗಳೂರು: 27 ಮೇ (ಫಿಕ್ರೋಖಬರ್ ಸುದ್ದಿ) ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಮೇ 28 ರಂದು ರಾಜ್ ಸರ್ಕಾರದ ವಿರುದಟಛಿ ಪ್ರತಿಭಟನೆ ಮಾಡಲು ನಿರ್ಧರಿಸಿರುವ ಬಿಜೆಪಿ ಪ್ರತಿಭಟನೆಗೆ ಅವಕಾಶ ಕಲ್ಪಿಸಿಕೊಡ ಬಾರದು ಎಂದು ಕಾಂಗ್ರೆಸ್‌ ಡಿಜಿಪಿಗೆ ಮನವಿ ಸಲ್ಲಿಸಿದೆ. ಕಾಂಗ್ರೆಸ್‌ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದ್‌ ರಾಜ್‌, ಜೇಮ್ಸ್‌ ಮಾರಿಟನ್‌ ಹಾಗೂ ಕೇರಳ ರಾಜ್ಯ ಸರ್ಕಾರದ ಪ್ರಕರಣ ದಲ್ಲಿ ಸಾರ್ವ ಜನಿಕರಿಗೆ ತೊಂದರೆಯಾಗುವ ಯಾವುದೇ ರೀತಿಯ ಬಂದ್‌ ಮತ್ತು ಹರತಾಳ ನಡೆಸದಂತೆ ಸುಪ್ರಿಂ ಕೋರ್ಟ್‌ ಆದೇಶ ಮಾಡಿದೆ. ಅಲ್ಲದೇ ಯಾವುದೇ ರಾಜಕೀಯ ಪಕ್ಷ ಅನಗತ್ಯ ಬಂದ್‌ ಆಚರಿಸಲು ನಿರ್ಬಂಧ ಹೇರಿದೆ.

ಹೀಗಾಗಿ ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಅನಗತ್ಯ ಬಂದ್‌ ಆಚರಿಸಲು ಮುಂದಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಅವರು ಬಂದ್‌ ಆಚರಿಸಲು ಅವಕಾಶ ನೀಡದೆ ಸೂಕ್ತ
ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا