Urdu   /   English   /   Nawayathi

ಶ್ರೀರಾಮುಲು ಬೆಂಬಲಿಗರ ಮೇಲಿನ ಐಟಿ ದಾಳಿ ಕೇವಲ ಕಣ್ಣೊರೆಸುವ ತಂತ್ರ : ಸಿಎಂ

share with us

ಮೈಸೂರು: 09 ಮೇ (ಫಿಕ್ರೋಖಬರ್ ಸುದ್ದಿ) ಶ್ರೀರಾಮುಲು ಬೆಂಬಲಿಗರ ಮೇಲಿನ ಐಟಿ ದಾಳಿ ಕೇವಲ ಕಣ್ಣೊರೆಸುವ ತಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಟೀಕಿಸಿದ್ದಾರೆ. ರಾಮಕೃಷ್ಣ ನಗರದಲ್ಲಿನ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇದುವರೆಗೆ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆಯುತ್ತಿದ್ದು , ಇದನ್ನು ನಾವು ಖಂಡಿಸಿದ್ದೆವು. ಈ ಹಿನ್ನೆಲೆಯಲ್ಲಿ ನಿನ್ನೆ ಶ್ರೀರಾಮುಲು ಬೆಂಬಲಿಗನ ಮನೆ ಮೇಲೆ ದಾಳಿ ನಡೆಸಲಾಗಿದೆ. ರಾಜಕೀಯ ಪ್ರೇರಿತ ಎನ್ನುವುದನ್ನು ಮರೆ ಮಾಚಲು ದಾಳಿ ಮಾಡಿಸಲಾಗಿದೆ ಎಂದು ದೂರಿದರು.

ಬಿಜೆಪಿ ಅಪವಾದದಿಂದ ತಪ್ಪಿಸಿಕೊಳ್ಳಲು ಇಂತಹ ಐಟಿ ದಾಳಿ ಮಾಡಲಾಗಿದೆ ಎಂದರು.
ನಾನು ಹನ್ನೆರಡು ಚುನಾವಣೆಗಳನ್ನು ನೋಡಿದ್ದೇನೆ. ಐಟಿ ದಾಳಿ ನಡೆದಿರಲಿಲ್ಲ ಎಂದು ಹೇಳಿದ ಸಿಎಂ ನಮ್ಮ ಪಕ್ಷದ ನಾಯಕರು ಉಳಿದುಕೊಂಡ ಕೊಠಡಿಗಳ ಮೇಲೆ ಹೆಚ್ಚು ದಾಳಿ ಮಾಡಲಾಗಿದೆ ಎಂದು ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا