Urdu   /   English   /   Nawayathi

ಟೆಕಿ ಶ್ರೀನಿವಾಸ ಕೂಚಿಭೊಟ್ಲ ಹತ್ಯೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

share with us

ವಾಷಿಂಗ್ಟನ್: 05 ಮೇ (ಫಿಕ್ರೋಖಬರ್ ಸುದ್ದಿ) ಕಳೆದ ವರ್ಷ ಭಾರತದ ಎಂಜಿನಿಯರ್ ಶ್ರೀನಿವಾಸ ಕೂಚಿಭೊಟ್ಲ ಅವರನ್ನು ಅಮೆರಿಕದ ಕನ್ಸಾಸ್‌ನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದ ಆರೋಪಿ ಆ್ಯಡಂ ಪ್ಯೂರಿಂಟನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪುರಿಂಟನ್‌ ಶ್ರೀನಿವಾಸ ಕೂಚಿಭೊಟ್ಲ ಅವರನ್ನು ಹತ್ಯೆಗೈದಿರುವ ಬಗ್ಗೆ ಕನ್ಸಾಸ್‌ ಕೋರ್ಟ್‌ನಲ್ಲಿ ಸ್ವಯಂ ಆಗಿ ಮಾರ್ಚ್‌ನಲ್ಲಿ ತಪ್ಪೊಪ್ಪಿಕೊಂಡಿದ್ದ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೂಚಿಭೊಟ್ಲ ಅವರ ಪತ್ನಿ ಸುನಯನಾ ದುಮಾಲ, ‘ಈ ತೀರ್ಪಿನಿಂದ ನನ್ನ ಪತಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ ಈ ತೀರ್ಪಿನಿಂದ ‘ದ್ವೇಷವನ್ನು ಎಂದೂ ಸಹಿಸಿಕೊಳ್ಳಲಾಗದು’ ಎಂಬ ಬಲವಾದ ಸಂದೇಶ ರವಾನೆಯಾಗಲಿದೆ’ ಎಂದು ಹೇಳಿದ್ದಾರೆ. 

ಏನಿದು ಪ್ರಕರಣ?
ಹೈದರಾಬಾದ್‌ನ ಎಂಜಿನಿಯರ್‌ ಶ್ರೀನಿವಾಸ ಕೂಚಿಭೊಟ್ಲ ಅವರು ತಮ್ಮ ಸ್ನೇಹಿತ ಅಲೋಕ್ ಮದಸಾನಿ ಅವರ ಜತೆಯಲ್ಲಿದ್ದಾಗ ಭಾರತ ಬಿಟ್ಟು ತೊಲಗಿ ಎಂದು ಘೋಷಣೆ ಕೂಗುತ್ತಾ ಕನ್ಸಾಸ್‌ನಲ್ಲಿ ಪುರಿಂಟನ್ ಗುಂಡು ಹಾರಿಸಿದ್ದನು. ಇದರಲ್ಲಿ ಕೂಚಿಭೋಟ್ಲ ಸಾವಿಗೀಡಾಗಿದ್ದರು. ಮದಸಾನಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹತ್ಯೆ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا