Urdu   /   English   /   Nawayathi

ಮಕ್ಕಳ ಅತ್ಯಾಚಾರ ಪ್ರಕರಣಗಳಿಗೆ ಪೋಷಕರೇ ಹೊಣೆ: ಬಿಜೆಪಿ ಶಾಸಕ

share with us

ಬಲಿಯಾ: 02 ಮೇ (ಫಿಕ್ರೋಖಬರ್ ಸುದ್ದಿ) ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪೋಷಕರೇ ಕಾರಣ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ. ‘ಪೋಷಕರು ತಮ್ಮ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. 15 ವರ್ಷದ ತನಕದ ಮಕ್ಕಳ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾಗಿ ನಿಗಾ ಇಡಬೇಕು’ ಎಂದು ಬಲಿಯಾ ಜಿಲ್ಲೆಯ ಬೈರಿಯಾದ ಶಾಸಕರಾಗಿರುವ ಸುರೇಂದ್ರ ತಿಳಿಸಿದ್ದಾರೆ. ‘ಆಧುನಿಕ ಕಾಲದಲ್ಲಿ ಬಾಲಕರು, ಬಾಲಕಿಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದರೆ ಅನಾಹುತಗಳು ಸಂಭವಿಸುತ್ತವೆ. ಸಾಮಾಜಿಕ ಪಿಡುಗಾಗಿರುವ ಅತ್ಯಾಚಾರ ಪ್ರಕರಣಗಳು ಹೆಚ್ಚಲು ಇದೇ ಕಾರಣ. ಮ‌ಕ್ಕಳು ಸ್ಮಾರ್ಟ್‌ಫೋನ್‌ ಬಳಸುವುದನ್ನು ನಿಷೇಧಿಸಬೇಕು’ ಎಂದು ಮಾಧ್ಯಮದವರೊಂದಿಗೆ ಅನೌಪಚಾರಿಕವಾಗಿ ನಡೆಸಿದ ಸಂಭಾಷಣೆ ವೇಳೆ ಅವರು ಹೇಳಿದ್ದಾರೆ.

ಅತ್ಯಾಚಾರ ಆರೋಪಿ ಉನ್ನಾವ್‌ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ ಅವರನ್ನು ಸಮರ್ಥಿಸಿಕೊಂಡಿದ್ದ ಸುರೇಂದ್ರ ಸಿಂಗ್, ಎರಡು ಮೂರು ಮಕ್ಕಳನ್ನು ಹೊಂದಿರುವ ತಾಯಂದಿರ ಮೇಲೆ ಯಾರೂ ಅತ್ಯಾಚಾರ ಎಸಗುವುದಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳು, ಸ್ತ್ರೀವಾದಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

2019ರ ಲೋಕಸಭಾ ಚುನಾವಣೆ ‘ಇಸ್ಲಾಂ’ ಮತ್ತು ‘ಭಗವಂತ’ನ ನಡುವಿನದು ಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا