Urdu   /   English   /   Nawayathi

ದೇವಸ್ಥಾನದ ತೀರ್ಥ ಕುಡಿಯಲೂ ರಾಹುಲ್ ಗಾಂಧಿಗೆ ತಿಳಿಯದು: ಅನಂತ ಹೆಗಡೆ ಲೇವಡಿ

share with us

ಬೆಳಗಾವಿ: 30 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ದೇಶದ ಅತ್ಯಂತ ದೊಡ್ಡ ಶ್ರದ್ಧಾಕೆಂದ್ರ ಶ್ರವಣಬೆಳಗೊಳಕ್ಕೆ ಬರಿ ಮೈಯಲ್ಲಿ ಹೋಗಿ ಬನ್ನಿ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಅನಂತಕುಮಾರ್‌‌ ಹೆಗಡೆ ವ್ಯಂಗ್ಯವಾಡಿದ್ದಾರೆ. ಇಲ್ಲಿನ ತಿಗಡೊಳ್ಳಿ ಗ್ರಾಮದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ದೇವಸ್ಥಾನಕ್ಕೆ ಖಾವಿ ಬಟ್ಟೆ ಹಾಕಿಕೊಂಡು, ಮಠಕ್ಕೆ ರುದ್ರಾಕ್ಷಿ ಹಾಕಿಕೊಂಡು, ಮಸೀದಿಗೆ ಕೋಳಿ ಪುಕ್ಕ ಹಾಕಿಕೊಂಡು, ಕೊರಳಲ್ಲಿ ಸಿಲುಬೆ ಕಟ್ಟಿಕೊಂಡು ಚರ್ಚ್‌ಗೆ ಹೋಗುತ್ತಾರೆ. 

ನಾಟಕ ಮಾಡುವ ಮಂದಿಗೆ ಪ್ರಾಮಾಣಿಕತೆ ಇಲ್ಲ. ಈ ನಾಟಕ ಕಂಪನಿ ಕಳೆದ 70 ವರ್ಷಗಳಿಂದ ಆಳಿದೆ. ಮುಂದಿನ ದಿನಗಳಲ್ಲಿ ಈ ನಾಟಕ ಕಂಪನಿ ನಮ್ಮ ದೇಶದಲ್ಲಿ ಇರಬಾರದು ಎಂದರು. ರಾಹುಲ್ ಗಾಂಧಿಗೆ ದೇಶದಲ್ಲಿ ಹಿಂದೂ ಧರ್ಮ ಇದೆ ಎಂದು ನೆನಪಾಗಿದೆ. ಆ ಕಾರಣಕ್ಕಾಗಿ ಎಲ್ಲಾ ದೇವಾಲಯ ಮಠಗಳಿಗೆ ಹೋಗುತ್ತಿದ್ದಾರೆ. ದೇವಸ್ಥಾನದಲ್ಲಿ ಕೊಟ್ಟ ತೀರ್ಥವನ್ನು ಹೇಗೆ ಕುಡಿಯಬೇಕೋ ಎಂಬುದು ಅವರಿಗೆ ಗೊತ್ತಿಲ್ಲವೆಂದು ಅನಂತ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದರು.

ಎಲ್ಲಿ ತನಕ ಈ ದೇಶದಲ್ಲಿ ಕಾಂಗ್ರೆಸ್ ಇರುತ್ತದೆಯೋ ಅಲ್ಲಿವರೆಗೂ ಈ ದೇಶಕ್ಕೆ ಭವಿಷ್ಯ ಇಲ್ಲ. ಲೂಟಿ ಮಾಡುವುದು, ಧರ್ಮಕ್ಕೆ ಅವಮಾನ ಮಾಡುವುದು ಇವರ ಕೆಲಸ. ರಾಜ್ಯದಲ್ಲಿ ಇಲ್ಲಿಯವರೆಗೂ ಆದ ಸಿಎಂಗಳಲ್ಲಿ ಸಿದ್ದರಾಮಯ್ಯ ದರಿದ್ರ ಮುಖ್ಯಮಂತ್ರಿ. ಅವರು ಸಮಾಜವನ್ನು ಒಡೆಯೋ ಕೆಲಸ ಮಾಡಿದ್ದಾರೆ. ಅವರಿಗೆ ಧರ್ಮವು ಇಲ್ಲ, ಪ್ರಜ್ಞೆಯೂ ಇಲ್ಲವೆಂದು ವಾಗ್ದಾಳಿ ಎಂದರು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا