Urdu   /   English   /   Nawayathi

ಎನ್.ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐ.ಟಿ.ದಾಳಿ

share with us

ಮಂಡ್ಯ: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ನಾಗಮಂಗಲ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿಯವರ ಆಪ್ತ ಲಕ್ಷ್ಮಿನಾರಾಯಣ ಎಂಬುವವರ ಮನೆ ಮೇಲೆ ಐ.ಟಿ ಅಧಿಕಾರಿಗಳು ನಡೆಸಿದ್ದಾರೆ. ನಿನ್ನೆ ತಡರಾತ್ರಿಯಲ್ಲಿ ನಾಗಮಂಗಲ ತಾಲ್ಲೂಕಿನ ಸುಖಧರೆ ಗ್ರಾಮದ ಚಲುವರಾಯಸ್ವಾಮಿಯವರ ಆಪ್ತ ಲಕ್ಷ್ಮೀನಾರಾಯಣ ಎಂಬುವವರ ಮನೆ ಮೇಲೆ ಮೈಸೂರಿನಿಂದ ಆಗಮಿಲಿದ್ದ 30ಮಂದಿ ಐ.ಟಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷ್ಮಿನಾರಾಯಣರವರನ್ನು ತೀವ್ರ ವಿಚಾರಣೆಗೊಳಪಡಿಸಿದರು. ದಾಳಿಯ ಸಮಯದಲ್ಲಿ ಲಕ್ಷ್ಮೀನಾರಾಯಣರವರ ಮನೆಯಲ್ಲಿ ಕೇವಲ 30ಸಾವಿರ ನಗದು ಹಣ ಸಿಕ್ಕಿತು. ವಿಚಾರಣೆಯ ನಂತರ ಆ ಹಣವನ್ನು ಲಕ್ಷ್ಮೀನಾರಾಯಣರವರಿಗೆ ಹಿಂದಿರುಗಿಸಿದರು.
ಇದೇ ಸಂಧರ್ಭದಲ್ಲಿ ಚಲುವರಾಯಸ್ವಾಮಿಯವರ ಇನ್ನಿಬ್ಬರ ಆಪ್ತರಾದ ಧನಂಜಯ ಹಾಗೂ ಬೆಟ್ಟೇಗೌಡ ಇವರುಗಳ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಹಣ ಮತ್ತು ಕೆಲವು ಬೆಳ್ಳಿ ಪದಾರ್ಥ ಹಾಗೂ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಯಿತು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا