Urdu   /   English   /   Nawayathi

ನನ್ನನ್ನು ಜೈಲಿಗೆ ಕಳುಹಿಸುವ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿ: ಯಡ್ಡಿಗೆ ಸಿದ್ದು ಸಲಹೆ

share with us

ಬೆಳಗಾವಿ: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ನನ್ನ ವಿರುದ್ಧ ದಾಖಲೆಗಳಿದ್ದರೆ ಎಸಿಬಿಗೋ, ನ್ಯಾಯಲಯಕ್ಕೋ, ಲೋಕಾಯುಕ್ತಕ್ಕೋ ದೂರು ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಯಡಿಯೂರಪ್ಪ ಅವರಿಗೆ ವಯಸ್ಸು 75 ಆದರೂ ಸಂಸದೀಯ ಭಾಷೆ ತಿಳಿದಿಲ್ಲ. ನನ್ನ ವಿರುದ್ದ ಏಕ ವಚನದಲ್ಲಿ ಮಾತನಾಡುತ್ತಾರೆ. ಅವರಿಗಿಂತ ಒಳ್ಳೆಯ ಭಾಷೆ ನನಗೆ ಬರುತ್ತದೆ. ಆದರೆ ಅದು ನನ್ನ ಸಂಸ್ಕೃತಿ ಅಲ್ಲ ಎಂದವರು ಹೇಳಿದರು.

ಮುಖ್ಯಮಂತ್ರಿ ಆಗಿದ್ದಾಗಲೇ ಜೈಲಿಗೆ ಹೋಗಿ ಬಂದಿರುವ ಕಳಂಕಿತ ವ್ಯಕ್ತಿ ಯಡಿಯೂರಪ್ಪ. ಈಗ ರೆಡ್ಡಿ ಸಹೋದರರ ಜೊತೆ ಸಖ್ಯ ಬೆಳೆಸಿದ್ದಾರೆ. ಅವರನ್ನೆಲ್ಲಾ ಈ ರಾಜ್ಯದ ಜನರು ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಅಮಿತ್ ಶಾ ಹಾಗೂ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೆಹಲಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅದಕ್ಕೆ ಫೋಟೊ ಬೇಕಿದ್ದರೆ ಕೊಡಬಹುದು. ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್. ಎರಡಕ್ಕೂ ಜನರ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ ಎಂದಿರುವ ಅಮಿತ್​ ಷಾಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಅಮಿತ್ ಷಾ ಒಬ್ಬ ದೊಡ್ಡ ನಾಟಕಕಾರ, ಸುಳ್ಳು ಹೇಳುವುದರಲ್ಲಿ ನಿಸ್ಸೀಮ, ಸುಳ್ಳು ಹೇಳುವುದು ಬಿಜೆಪಿಯವರ ಆಸ್ತಿ. ರಾಜ್ಯದಲ್ಲಿ ಸುನಾಮಿ ಇದ್ದರೆ ಅದು ಬಿಜೆಪಿ ವಿರುದ್ಧ ಇದೆ ಎಂದು ವ್ಯಂಗ್ಯವಾಡಿದರು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا