Urdu   /   English   /   Nawayathi

ಮತ ಗಿಟ್ಟಿಸಿಕೊಳ್ಳಲು ಮಕ್ಕಳನ್ನು ದತ್ತು ಪಡೆಯಿರಿ: ಬಿಜೆಪಿ ಕಾರ್ಯಕರ್ತರಿಗೆ ಅನಂದಿಬೆನ್‌ ಬೋಧನೆ

share with us

ಮಧ್ಯಪ್ರದೇಶ: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ‘ಮತ ಗಿಟ್ಟಿಸಿಕೊಳ್ಳಲು ಬಡ, ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆಯಿರಿ’ ಎಂದು ಇಲ್ಲಿನ ಗವರ್ನರ್‌ ಅನಂದಿಬೆನ್‌ ಪಟೇಲ್‌ ಅವರು ಬಿಜೆಪಿ ಕಾರ್ಯಕರ್ತರಿಗೆ ಬೋಧನೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇತ್ತೀಚೆಗೆ ಚಿತ್ರಕೂಟದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದ್ದು, ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕಾದರೆ ಬಡ, ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆಯಿರಿ ಎಂದು ಸಲಹೆ ನೀಡುತ್ತಿರುವುದು ವಿಡಿಯೊದಲ್ಲಿದೆ.

‘ನೀವು ಮತಗಳನ್ನು ಪಡೆಯಬೇಕಾದರೆ ಹಳ್ಳಿಗಳಿಗೆ ಭೇಟಿ ನೀಡಿ. ಜನರೊಂದಿಗೆ ಬೆರೆತು ಕಳಾಜಿಯನ್ನು ತೋರಿಸಿ ಆಗ ಮಾತ್ರ ನಿಮಗೆ ಮತಗಳು ಸಿಗುತ್ತದೆ. ಜತೆಗೆ, ಪ್ರಧಾನಿ ಮೋದಿ ಅವರ ಕನಸು ನನಸಾಗುತ್ತದೆ’ ಎಂದು ಹೇಳಿದ್ದಾರೆ. ಸದ್ಯ ಅನಂದಿಬೆನ್‌ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕರು ರಾಷ್ಟ್ರಪತಿ ಭವನಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

https://youtu.be/FtIHJnL0Fs8

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا