Urdu   /   English   /   Nawayathi

ಮೋದಿ ವಿರುದ್ದ ಹಾವು, ಮುಂಗುಸಿ, ನಾಯಿಗಳು ಒಂದಾಗುತ್ತಿವೆ: ಶಾ ವ್ಯಂಗ್ಯ

share with us

ಮುಂಬೈ: 07 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಹಾವು, ಮುಂಗುಸಿ, ನಾಯಿ ಮತ್ತು ಬೆಕ್ಕುಗಳು ಒಂದಾಗುತ್ತಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ಬಿಜೆಪಿಯ 38ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೈತ್ಯ ಪ್ರವಾಹ ಬಂದಾಗ ಕೇವಲ ಆಲದ ಮರ ಮಾತ್ರ ನಿಶ್ಚಲವಾಗಿ ನಿಲ್ಲುತ್ತದೆ. ಹಾವು, ಮುಂಗುಸಿ, ನಾಯಿ, ಬೆಕ್ಕು ಸೇರಿದಂತೆ ಎಲ್ಲಾ ಪ್ರಾಣಿಗಳು ಏರುತ್ತಿರುವ ನೀರಿನಿಂದ ರಕ್ಷಿಸಿಕೊಳ್ಳಲು ಆಲದ ಮರ ಹತ್ತುತ್ತವೆ. ಮೋದಿ ಪ್ರವಾಹದಿಂದಾಗಿ ಈಗ ಎಲ್ಲಾ ನಾಯಿ, ಬೆಕ್ಕು, ಹಾವು, ಮುಂಗುಸಿಗಳೂ ಚುನಾವಣೆ ಎದುರಿಸಲು ಒಗ್ಗಟ್ಟಾಗುತ್ತಿವೆ ಎಂದು ಪ್ರತಿಪಕ್ಷಗಳನ್ನು ಪ್ರಾಣಿಗೆ ಹೋಲಿಸುವ ಅಮಿತ್ ಶಾ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. 

ಸುಳ್ಳು ಭರವಸೆ ನೀಡುವ ಬದಲಿಗೆ, ಮೋದಿ ಸರಕಾರ ಮಾಡಿದ ಕಾರ್ಯದಿಂದಾಗಿ ಈ ಬಾರಿ ಬಿಜೆಪಿಗೆ ಗೆಲುವು ಸಿಗಲಿದೆ ಎಂದು ಅವರು ಹೇಳಿದರು

ಬಳಿಕ ತಾವು ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದ ಅಮಿತ್ ಶಾ, ಸಮಾನ ಸೈದ್ಧಾಂತಿಕ ನಿಲುವು ಹೊಂದಿಲ್ಲದ ಪಕ್ಷಗಳು ಮೋದಿ ಅವರ ಭಯದಿಂದ ಒಗ್ಗೂಡುತ್ತಿವೆ ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا