Urdu   /   English   /   Nawayathi

ರಾಹುಲ್‌ ಪ್ರಚಾರದಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸೋಲು: ಬಿಜೆಪಿ

share with us

ಹೊಸದಿಲ್ಲಿ: 24 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಚುನಾವಣಾ ಪ್ರಚಾರ ಶೈಲಿಯನ್ನು ಲೇವಡಿ ಮಾಡಿರುವ ಬಿಜೆಪಿ, ರಾಹುಲ್‌ ಗಾಂಧಿ ಅವರ ಪ್ರಚಾರದಿಂದಾಗಿ ಅವರ ಪಕ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲುನುಭವಿಸಲಿದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಲೀಧರ ರಾವ್‌ ಹೇಳಿದ್ದಾರೆ. ತುಮಕೂರಿನಲ್ಲಿ ನಿನ್ನೆ ಶುಕ್ರವಾರ ಬಿಜೆಪಿ ಗೊಲ್ಲ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದರು. 

"ರಾಹುಲ್‌ ಗಾಂಧಿ ಆಗಮನ, ಸಿದ್ಧರಾಮಯ್ಯ ನಿರ್ಗಮನ' ಎಂದು ಕಟಕಿಯಾಡಿದ ಮುರಲೀಧರ್‌ ಅವರು, ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿಸಿದ್ಧರಾಮಯ್ಯ ಅವರು ರಾಜ್ಯಕ್ಕಾಗಿ ಏನೂ ಮಾಡಿಲ್ಲ; ಈ ವರೆಗೂ ಅವರು ನಿದ್ದೆ ಮಾಡಿಕೊಂಡಿದ್ದರು; ಈಗ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ; ತಮ್ಮ ಕಾರಿನಲ್ಲಿ ಶಂಕುಸ್ಥಾಪನೆಗಾಗಿ ಅಡಿಗಲ್ಲುಗಳನ್ನು ಒಯ್ಯುತ್ತಿದ್ದಾರೆ. ಕೆಲಸ ಮಾಡಲು ಸಮಯವಿದ್ದಾಗ ಅವರು ಏನೂ ಮಾಡಲಿಲ್ಲ; "ನವ ಕರ್ನಾಟಕ' ಘೋಷಣೆಯ ಮೂಲಕ ಅವರು ಈಗ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು. 

ಕಾಂಗ್ರೆಸ್‌ ಈಗ ಮುಗಿದು ಹೋಗಿರುವ ಶಕ್ತಿಯಾಗಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯ ಅವರಿಂದಾಗಿ ಮಾಫಿಯಾಗಳು ಬಲಿಷ್ಠವಾಗಿವೆ. ಈ ಸ್ಥಿತಿಯನ್ನು ಕೊನೆಗೊಳಿಸಲು ಜನರು ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮುರಲೀಧರ್‌ ಕರೆ ನೀಡಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا