Urdu   /   English   /   Nawayathi

ಮಂಗಳೂರು: ಕಾರು-ಬೈಕ್ ಅಪಘಾತದಲ್ಲಿ ಯುವಕ ಸಾವು

share with us

ಮಂಗಳೂರು: 24 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಯಯ್ಯಾಡಿಯಲ್ಲಿ ಕಾರು ಬೈಕಿಗೆ ಗುದ್ದಿದಾಗ ಬೈಕ್ ಹಿಂಬದಿ ಸವಾರ ಬಜಾಲ್ ನಿವಾಸಿ ಪುಷ್ಪರಾಜ್(22) ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಪ್ಪಿದ್ದಾರೆ. ಪುಷ್ಪರಾಜ್ ಅವರು ಗೆಳೆಯನ ಬೈಕಿನಲ್ಲಿ ತಾವು ಕೆಲಸ ಮಾಡುವ ಸ್ಥಳಕ್ಕೆ ತೆರಳುತ್ತಿದ್ದರು. ಯಯ್ಯಾಡಿ ಬಳಿ ಬೈಕ್ ಮತ್ತು ಕಾರು ಅಪಘಾತ ಸಂಭವಿಸಿತು. ಬೈಕ್ ಸವಾರರಿಬ್ಬರೂ ಗಂಭೀರ ಗಾಯಗೊಂಡರು. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪುಷ್ಪರಾಜ್ ಅವರು ಸಹೋದರ ಧೀರಜ್ ಅವರನ್ನು ಅಗಲಿದ್ದಾರೆ. ಬೆಳ್ತಂಗಡಿಯಲ್ಲಿ ಉಜಿರೆ ಸಮೀಪ ಗುರಿಪಳ್ಳ ರಸ್ತೆಯ ಅಲಕೆ ಎಂಬಲ್ಲಿ ಬೈಕಿಗೆ ಟ್ಯಾಂಕರ್ ಗುದ್ದಿದಾಗ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟ ಕಳವಳಕಾರಿ ಘಟನೆ ಶುಕ್ರವಾರ ರಾತ್ರಿ ವರದಿಯಾಗಿದೆ. 
ಗುರಿಪಳ್ಳದ ಹರೀಶ್ ಹಾಗೂ ಗುರಿಪಳ್ಳ ಕನ್ಯಾಡಿಯ ಸುಧೀರ್ ಮೃತ ಯುವಕರು ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا