Urdu   /   English   /   Nawayathi

ಎಂ.ಆಶ್ವಿನ್‍ಕುಮಾರ್‍ ಆಯ್ಕೆ ಖಂಡಿಸಿ ಪ್ರತಿಭಟನೆ

share with us

ತಿ.ನರಸೀಪುರ: 19 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಆಶ್ವಿನ್‍ಕುಮಾರ್‍ರವರ ಹೆಸರನ್ನು ಪ್ರಕಟಿಸಿರುವುದನ್ನು ವಿರೋಧಿಸಿ ವ್ಯಾಸರಾಜಪುರ, ಸಿದ್ದನಹುಂಡಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ತಿ.ನರಸೀಪುರ ಬನ್ನೂರು ಮುಖ್ಯರಸ್ತೆಯ ವ್ಯಾಸರಾಜಪುರ ಗ್ರಾಮದಲ್ಲಿ ರಸ್ತೆ ತಡೆ ನಡೆಸಿದ ಗ್ರಾಮದ ಯುವಕರು, ತಿ.ನರಸೀಪುರ ಕ್ಷೇತ್ರ ಈ ಬಾರಿ ಜೆಡಿಎಸ್ ಭದ್ರ ಕೋಟೆಯಾಗಿದೆ. ಆದರೆ ಪಕ್ಷದ ವರಿಷ್ಟರು ಕಾಂಗ್ರೇಸ್ ಪಕ್ಷದ ಡಾ.ಎಚ್.ಸಿ.ಮಹದೇವಪ್ಪರವರ ಪುತ್ರ ಸುನೀಲ್ ಬೋಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಎಂ.ಅಶ್ವಿನ್‍ಕುಮಾರ್‍ರವರಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ಪಕ್ಷದ ಸೋಲಿಗೆ ಕಾರಣಕರ್ತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿರವರು ಎಂ.ಅಶ್ವಿನ್‍ಕುಮಾರ್ ಹೊರತು ಪಡಿಸಿ ಉಳಿದ 10 ಮಂದಿ ಆಕ್ಷಾಂಕ್ಷಿಗಳ ಪೈಕಿ ಯಾರಿಗಾದರೂ ಟಿಕೆಟ್ ನೀಡಿ ಪಕ್ಷದ ಗೆಲುವಿಗೆ ಸಹಕರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವ ಮುಖಂಡರಾದ ಸಂದೀಪ್, ಮಲಿಯೂರು ಶಿವಕುಮಾರ್, ರವಿ, ಪ್ರಸಾದ್, ರಂಗನಾಥ, ವೆಂಕಟೇಶ್, ಹರೀಶ್, ಅಪ್ಪು, ನಾಗರಾಜು, ಧರ್ಮ, ರಂಗರಾಜು ಇತರರು ಇದ್ದರು

 ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا