Urdu   /   English   /   Nawayathi

ಇಸ್ಪೀಟ್ ಆಡುತ್ತಿದ್ದವರ ಮೇಲೆ ನಕಲಿ ಪೊಲೀಸ್ ದಾಳಿ: 10 ಲಕ್ಷ ರೂ. ದೋಚಿ ಪರಾರಿ

share with us

ಬೆಳ್ತಂಗಡಿ: 04 ಜೂನ್  2020 (ಫಿಕ್ರೋಖಬರ್ ಸುದ್ದಿ) ಲಾಯ್ಲ ಗ್ರಾಮ ಪಡ್ಲಾಡಿ ಎಂಬಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ನಕಲಿ ಪೊಲೀಸರು ದಾಳಿ ನಡೆಸಿ 10 ಲಕ್ಷ ರೂಪಅಯಿ ದೋಚಿ ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಚಿಕ್ಕಮಗಳೂರಿನ ಮಳಲೂರಿನ ನಿವಾಸಿ ಹೊಯ್ಸಳ ಜೆ.ಪಿ ಎಂಬುವರು ದಾವೂದ್ ಎಂಬಾತನ ತಂಡ ಈ ಕೃತ್ಯ ಎಸಗಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೊಯ್ಸಳ ಜೆ. ಪಿ. ಅವರು ಲಾಯ್ಲ ಸಮೀಪದ ಪಡ್ಲಾಡಿಯ ಮನೆಯೊಂದರಲ್ಲಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದರು. ಈ ವೇಳೆ ದಾವೂದ್ ಕೂಡ ಸ್ಥಳದಲ್ಲಿದ್ದು, ಇವನ ಸೂಚನೆಯಂತೆ ರಾತ್ರಿ ಸುಮಾರು 10-30 ರ ವೇಳೆಗೆ 5 ರಿಂದ 6 ಜನರಿದ್ದ ನಕಲಿ ಪೊಲೀಸರ ತಂಡ ದಾಳಿ ನಡೆಸಿದೆ. ಹೊಯ್ಸಳ ಅವರ ಮೇಲೆ ಹಲ್ಲೆ ನಡೆಸಿ 10 ಲಕ್ಷ ರೂ. ಇದ್ದ ಬ್ಯಾಗನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ. ಅಲ್ಲದೆ ಕಾನೂನುಬಾಹಿರವಾಗಿ ಇಸ್ಪೀಟ್ ಆಡುತ್ತಿದ್ದ ಹಿನ್ನೆಲೆ ಆರೋಪಿಗಳು ಹಾಗೂ ಅಪಾದಿತರ ವಿರುದ್ಧವೂ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ. ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا