Urdu   /   English   /   Nawayathi

ಈಟಿವಿ ಭಾರತ್ ವರದಿಗೆ ಸ್ಪಂದಿಸಿ ತ್ಯಾಜ್ಯ ಸ್ವಚ್ಛಗೊಳಿಸಿದ ಮುಂಡಾಜೆ ಗ್ರಾಮ ಪಂಚಾಯತ್​

share with us

ಬೆಳ್ತಂಗಡಿ: 04 ಜೂನ್  2020 (ಫಿಕ್ರೋಖಬರ್ ಸುದ್ದಿ) ಗ್ರಾಮ ಪಂಚಾಯತ್ ಗಡಿ ಗೊಂದಲ ಎಂಬ ತ್ಯಾಜ್ಯ ಕುರಿತಾಗಿ ಈಟಿವಿ ಭಾರತ್​ನ ವರದಿಗೆ ಸ್ಪಂದಿಸಿರುವ ಮುಂಡಾಜೆ ಗ್ರಾಮ ಪಂಚಾಯತ್​ ವಿಲೇವಾರಿ ಮಾಡಿ ಸ್ವಚ್ಛಗೊಳಿಸಿದ್ದಾರೆ. ತಾಲೂಕಿನ ಮುಂಡಾಜೆ ಹಾಗೂ ಚಾರ್ಮಾಡಿ ಗ್ರಾಮ ಪಂಚಾಯತ್​ಗಳ ಗಡಿ ಗೊಂದಲದಿಂದ, ನದಿಯಲ್ಲಿ ಹಾಗೂ ರಸ್ತೆ ಬದಿಯಲ್ಲಿ ಬಿಸಾಡಿರುವ ತ್ಯಾಜ್ಯ ಕೊಳೆತು ಮಾರಕ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ ಎಂಬ ವಿಸ್ತೃತ ವರದಿಯನ್ನು ಎರಡು ದಿನಗಳ ಹಿಂದೆ ಈಟಿವಿ ಭಾರತ್ ಪ್ರಕಟಿಸಿತ್ತು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ಮುಂಡಾಜೆ ಗ್ರಾಮ ಪಂಚಾಯತ್​ ಸಿಬ್ಬಂದಿ ದುರ್ವಾಸನೆ ಬೀರುತ್ತಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿ ಸ್ವಚ್ಛಗೊಳಿಸಿದ್ದಾರೆ. ತ್ಯಾಜ್ಯವಿದ್ದ ಸ್ಥಳ ಚಾರ್ಮಾಡಿ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಇರುವುದರಿಂದ ಅವರು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಅವರು ಮಾಡಬೇಕಿದ್ದ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಮುಂಡಾಜೆ ಪಂಚಾಯತ್​ ಸಿಬ್ಬಂದಿಯೊಬ್ಬರು ತಿಳಿಸಿದರು. ಆ ಪರಿಸರ ಸ್ವಚ್ಛಗೊಳಿಸಿದ್ದರಿಂದ ಸಾರ್ವಜನಿಕರು ನೆಮ್ಮದಿಯಿಂದ ಓಡಾಡುವಂತಾಗಿದೆ. ವರದಿಯ ಮೂಲಕ ಅಧಿಕಾರಿಗಳನ್ನು ಎಚ್ಚರಿಸಿದ ಈಟಿವಿ ಭಾರತ್​ಗೆ ಸಾರ್ವಜನಿಕರು ಅಭಿನಂದನೆ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا