Urdu   /   English   /   Nawayathi

ಮಂಗಳೂರು | ಲಕ್ಷದ್ವೀಪದಿಂದ ಬಂದ ಕಾರ್ಮಿಕರು

share with us

ಮಂಗಳೂರು: 30 ಮೇ 2020 (ಫಿಕ್ರೋಖಬರ್ ಸುದ್ದಿ) ಲಾಕ್‌ಡೌನ್ ಪರಿಣಾಮ ಲಕ್ಷದ್ವೀಪದಲ್ಲಿ ಬಾಕಿಯಾಗಿದ್ದ 19 ಕಾರ್ಮಿಕರನ್ನು ಹೊತ್ತುತಂದ ನೌಕೆ ಗುರುವಾರ ಇಲ್ಲಿನ ಬಂದರು ಜೆಟ್ಟಿಗೆ ಬಂದಿಳಿಯಿತು. ದಕ್ಷಿಣ ಕನ್ನಡ ಜಿಲ್ಲೆಯ 19 ಮಂದಿ ವಿವಿಧ ಉದ್ಯೋಗಗಳನ್ನು ಅರಸಿ ಲಕ್ಷದೀಪಕ್ಕೆ ಈ ಹಿಂದೆ ತೆರಳಿದ್ದು, ಲಾಕ್‌ಡೌನ್ ಕಾರಣ ಬಾಕಿಯಾಗಿದ್ದರು. ಅವರನ್ನು ಕರೆತರಲು ಸರ್ಕಾರ ಈ ವಿಶೇಷ ನೌಕೆಯ ವ್ಯವಸ್ಥೆ ಮಾಡಿತ್ತು. ಜೆಟ್ಟಿಯಿಂದ ಸುಮಾರು 4 ಕಿಮೀ ದೂರದ ಸಮುದ್ರದ ಗಡಿಯಂಚಿಗೆ ಬಂದ ನೌಕೆಯನ್ನು ಪೈಲೆಟ್ ಹುಸೈನಬ್ಬ ಬಂದರಿಗೆ ತಂದರು. ಆರೋಗ್ಯ ಇಲಾಖೆ  ಸಿಬ್ಬಂದಿ ಕೋವಿಡ್ 19 ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا