Urdu   /   English   /   Nawayathi

ಆರೋಗ್ಯ ತಪಾಸಣೆ ನಂತರವೇ ಪ್ರವೇಶ

share with us

ಮುಂಡಗೋಡ: 05 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಬೆಂಗಳೂರಿನಿಂದ ಮರಳಿ ಬಂದವರನ್ನು ಗ್ರಾಮಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಊರಿಗೆ ಬರುವಂತೆ ನೂರಾರು ಜನರನ್ನು ಮರಳಿ ಕಳುಹಿಸಿದ ಘಟನೆ ತಾಲೂಕಿನ ಮೈನಳ್ಳಿ ಭಾಗದಲ್ಲಿ ಮಂಗಳವಾರ ಜರುಗಿದೆ. ತಾಲೂಕಿನ ವಿವಿಧ ಗ್ರಾಮಗಳಿಂದ ಕೆಲಸ ಅರಸಿ ಸಾವಿರಾರು ಜನರು ಬೆಂಗಳೂರಿಗೆ ಹೋಗಿದ್ದು ಇದೀಗ ಕೋವಿಡ್ 19 ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾ.31ರ ವರೆಗೆ ಕರ್ನಾಟಕ ಲಾಕ್‌ ಡೌನ್‌ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬೆಂಗಳೂರನಿಂದ ಬಹುತೇಕರು ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ತಾಲೂಕಿನ ಮೈನಳ್ಳಿ ಗ್ರಾಮಕ್ಕೆ ಮಂಗಳವಾರ ಬೆಳಗ್ಗೆ 100ಕ್ಕೂ ಹೆಚ್ಚು ಜನರು ಆಗಮಿಸಿದ್ದು, ಕೂಡಲೇ ಗ್ರಾಮಸ್ಥರು ಎಲ್ಲರು ಸರಕಾರಿ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಗ್ರಾಮದೊಳಗೆ ಬರುವಂತೆ ತಿಳಿಸಿ ಎಲ್ಲರನ್ನು ಮರಳಿ ಕಳುಹಿಸಿದರು. ಎಲ್ಲರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ವರದಿ ನೀಡಿದ ನಂತರ ಗ್ರಾಮದಲ್ಲಿ ಸೇರಿಸಿಕೋಳ್ಳಲಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا