Urdu   /   English   /   Nawayathi

ಮಂಗಳೂರಿಗೆ ಆಗಮಿಸುವ ವಾಹನಗಳಿಗೆ ತಡೆ: ಜೆಪ್ಪಿನ ಮೊಗರು ಬಳಿ ಸಾಲುಗಟ್ಟಿ ನಿಂತ ವಾಹನಗಳು

share with us

ಉಳ್ಳಾಲ: 23 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸೆಕ್ಷನ್ 144 ಜಾರಿಯಿದ್ದರೂ ಖಾಸಗಿ ವಾಹನಗಳು ಮಂಗಳೂರಿಗೆ ಆಗಮಿಸುವುದನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನ ಮೊಗರು ಬಳಿಯ ಮಹಾಂಕಾಳಿ ಕ್ರಾಸ್ (ಮೊಗರು) ಬಳಿ ವಾಹನಗಳನ್ನು ತಡೆಯಲಾಯಿತು. ತಲಪಾಡಿ, ಉಳ್ಳಾಲ, ಕೊಣಾಜೆ, ತೊಕ್ಕೊಟ್ಟು ಮಾರ್ಗವಾಗಿ ಮಂಗಳೂರು ನಗರವನ್ನು ಸಂಪರ್ಕಿಸುವ ವಾಹನಗಳನ್ನು ದಕ್ಷಿಣ ವಿಭಾಗದ ಸಂಚಾರಿ ಪೊಲೀಸರು ಮತ್ತು ಕಂಕನಾಡಿ ನಗರ ಪೊಲೀಸರು ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದಲ್ಲಿ ವಾಹನಗಳನ್ನು ತಡೆ ಹಿಡಿಯಲಾಯಿತು.

ಆಕ್ರೋಶ ವ್ಯಕ್ತಪಡಿಸಿದ ಸವಾರರು: ಏಕಾಏಕಿ ವಾಹನಗಳ ಸ್ಥಗಿತಗೊಳಿಸಿದ್ದರಿಂದ ಸವಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಅಬ್ದುಲ್ ರಹಿಮಾನ್ ವಾಹನ ಸವಾರರಿಗೆ ಹೆಚ್ಚು ಸಂಚಾರ ನಡೆಸದೆ ಮನೆಯಲ್ಲೇ ಇರುವಂತೆ ಮನವಿ ಮಾಡಿದರು.

ಅರ್ಧ ಗಂಟೆಗೊಮ್ಮೆ ಸಂಚಾರಕ್ಕೆ ವ್ಯವಸ್ಥೆ : ವಾಹನ ಚಾಲಕರಿಗೆ ಪ್ರತೀ ಅರ್ಧಗಂಟೆಗೊಮ್ಮೆ ಸಂಚಾರವನ್ನು ಮುಕ್ತಗೊಳಿಸಿ ವಾಪಾಸ್ ಬಾರದಂತೆ ಪೊಲೀಸರು ಎಚ್ಚರಿಕೆ ನೀಡಿದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا