Urdu   /   English   /   Nawayathi

ಮಂಗಳೂರು ಖಾಜಿ ಕೊಲೆಗೆ ಯತ್ನ: ದೂರು ದಾಖಲು

share with us

ಮಂಗಳೂರು: 27 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಮಂಗಳೂರು ಖಾಜಿ ತ್ವಾಖಾ ಅಹಮದ್ ಮುಸ್ಲಿಯಾರ್ ಅವರ ಕೊಲೆಗೆ ಯತ್ನ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಸ್ಲಿಯಾರ್ ಅವರು ಇತ್ತೀಚಿಗೆ ಮಾಡಿದ ಭಾಷಣವನ್ನು ವಿರೋಧಿಸಿ ಸಂಘಟನೆಯೊಂದಕ್ಕೆ ಸೇರಿದ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಇದರಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಫೆಬ್ರವರಿ 8 ರಂದು ಮಂಗಳೂರಿನ ಹಳೆಯಂಗಡಿಯಲ್ಲಿ ಧಾರ್ಮಿಕ ಪ್ರವಚನ ಮುಗಿಸಿ ಕಾಸರಗೂಡಿಗೆ ತೆರಳುತ್ತಿದ್ದ ವೇಳೆ ಮಂಗಳೂರಿನ ನಂತೂರಿನಲ್ಲಿ ಅವರ ಕಾರನ್ನು ಪಂಕ್ಚರ್ ಮಾಡಿ ನಿಲ್ಲಿಸಲಾಗಿತ್ತು. ಈ ವೇಳೆ ದುಷ್ಕರ್ಮಿಯೊಬ್ಬ ಪಿಸ್ತೂಲ್ ಹಿಡಿದುಕೊಂಡು ಖಾಜಿ ಬಳಿ ಬಂದಿದ್ದು ಆಗ ಖಾಜಿ ಅವರ ಕಾರು ಡ್ರೈವರ್ ಇದನ್ನು ನೋಡಿ ಕಾರನ್ನು ಚಲಾಯಿಸಿ ತಪ್ಪಿಸಿಕೊಂಡಿದ್ದಾರೆ. ಮರುದಿನ ಖಾಜಿ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಖಾಜಿಯವರಿಗೆ ಗನ್ ಮ್ಯಾನ್ ಮತ್ತು ಎಸ್ಕಾರ್ಟ್ ನೀಡಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا