Urdu   /   English   /   Nawayathi

ಯತ್ನಾಳ್​ ಹೇಳಿಕೆ ಖಂಡಿಸಿ ಶಿವಮೊಗ್ಗದಲ್ಲಿ ರೈತ ಸಂಘದಿಂದ ಪ್ರತಿಭಟನೆ

share with us

ಶಿವಮೊಗ್ಗ: 27 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿಕೆ ಖಂಡಿಸಿ ನಗರದಲ್ಲಿ ರೈತ ಸಂಘ ಪ್ರತಿಭಟನೆ ನಡೆಸಿದೆ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಪಕ್ಷಾತೀತವಾಗಿ ಇರುವಂತವರು. ಅಂತಹವರನ್ನು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಅವರೊಬ್ಬ ಕಾಂಗ್ರೆಸ್‌ ಏಜೆಂಟ್ ಎಂದು ಹೇಳಿಕೆ ನೀಡಿ‌ ಅಪಮಾನ ಮಾಡಿದ್ದಾರೆ. ಹಾಗಾಗಿ ಯತ್ನಾಳ್​ ಅವರು ತಕ್ಷಣ ದೊರೆಸ್ವಾಮಿ ಹಾಗೂ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ದೊರೆಸ್ವಾಮಿಯವರು ಗಾಂಧಿ ತತ್ವದಡಿ ಜೀವನ ನಡೆಸಿಕೊಂಡು ಬಂದಂತಹವರು. ಅವರು ಸಂವಿಧಾನದ‌ ಆಶಯಗಳಿಗೆ ಬದ್ಧರಾಗಿ ನುಡಿದಂತೆ ನಡೆಯುತ್ತಿರುವವರು. ಅವರ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا