Urdu   /   English   /   Nawayathi

ದೇಶದ್ರೋಹ ಪ್ರಕರಣ: ಜಾಮೀನು ಅರ್ಜಿ ಸಲ್ಲಿಸೋಕೆ ಬಂದ ವಕೀಲರಿಗೆ ಗೋಬ್ಯಾಕ್ ಘೋಷಣೆ

share with us

ಧಾರವಾಡ: 24 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಹುಬ್ಬಳ್ಳಿ ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲು ಆಗಮಿಸಿದ್ದ ವಕೀಲರಿಗೆ ಗೋಬ್ಯಾಕ್ ಘೋಷಣೆ ಕೇಳಿ‌ಬಂದಿತು. ಧಾರವಾಡದ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲರನ್ನು ಸರ್ಕೀಟ್ ಹೌಸ್​ನಲ್ಲಿ ಪೊಲೀಸ್ ಭದ್ರತೆಯಲ್ಲಿ ಇಡಲಾಗಿತ್ತು. ಅಲ್ಲಿಗೆ ಆಗಮಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗೋಬ್ಯಾಕ್...ಗೋಬ್ಯಾಕ್...ಅಡ್ವೋಕೇಟ್ ಗೋಬ್ಯಾಕ್...ಎಂದು ಘೋಷಣೆ ಕೂಗಿದರು. ದೇಶದ್ರೋಹಿಗಳ ಪರವಾಗಿ ಜಾಮೀನು ಕೇಳಲು ಬಂದಿರುವಿರಲ್ಲ ಗೊತ್ತಾಗುವುದಿಲ್ಲವೇ ಎಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ವಕೀಲರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا