Urdu   /   English   /   Nawayathi

ಶ್ರೀರಂಗಪಟ್ಟಣದಲ್ಲಿ ಅಚ್ಚರಿ... ಬೋರ್​ವೆಲ್​ನಲ್ಲಿ ನೀರಿನೊಂದಿಗೆ ಬರ್ತಿದೆ ಪೆಟ್ರೋಲ್!

share with us

ಮಂಡ್ಯ/ಮೈಸೂರು: 23 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಕೆಲ ದಿನಗಳ ಹಿಂದೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಚಿನ್ನದ ಗಣಿ ವದಂತಿ ಹಬ್ಬಿತ್ತು. ಆದರೀಗ ಮತ್ತೊಂದು ಅಚ್ಚರಿಯ ಘಟನೆ ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಸಿದ್ದಲಿಂಗಪುರದಲ್ಲಿ ಬೆಳಕಿಗೆ ಬಂದಿದೆ. ಶ್ರೀರಂಗಪಟ್ಟಣ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದ ಮನೆಯೊಂದರ ಬೋರ್​ವೆಲ್​ನಲ್ಲಿ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿದೆ. ಇದನ್ನು ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೂಲದ ಪ್ರಕಾಶ್ ಹಾಗೂ ಭವಾನಿ ದಂಪತಿ, ಒಂದೇ ಕಟ್ಟಡದಲ್ಲಿ 4 ಮನೆ ಕಟ್ಟಿಸಿ ಬಾಡಿಗೆಗೆ ‌ನೀಡಿದ್ದರು. ನೀರಿನ ಸಮಸ್ಯೆ ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ 5 ವರ್ಷದ ಹಿಂದೆ ಬೋರ್​ವೆಲ್ ಕೊರೆಯಿಸಿದ್ದರು. ಕೆಲ ದಿನಗಳಿಂದ ಬೋರ್​ವೆಲ್ ನೀರು ಪೆಟ್ರೋಲ್ ವಾಸನೆ ಬರುತ್ತಿದೆ ಎಂದು ಬಾಡಿಗೆದಾರರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಬೋರ್​ವೆಲ್​ನಿಂದ ತೆಗೆದ ನೀರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದೆ. ಇದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا