Urdu   /   English   /   Nawayathi

ಅರಣ್ಯಾಧಿಕಾರಿಗಳಿಗೆ ನ್ಯಾಯಾಲಯದ ಆದೇಶ ಪ್ರತಿಯನ್ನು ಸಲ್ಲಿಸಿದ ಅತಿಕ್ರಮಣದಾರರು

share with us

ಭಟ್ಕಳ: 16 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಕಳೆದ 2019ರಲ್ಲಿ ಹೈಕೋರ್ಟ್ ಅತಿಕ್ರಮಣದ ಜಾಗವನ್ನು ಅಸ್ಥಿರಗೊಳಿಸದಂತೆ ಆದೇಶ ನೀಡಿತ್ತು. ಇದರ ಪ್ರತಿಯನ್ನು ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ, ರವೀಂದ್ರ ನಾಯ್ಕ್, ದೇವರಾಜ್ ಅವರ ಸಮ್ಮುಖದಲ್ಲಿ ಅತಿಕ್ರಮಣದಾರರು ಭಟ್ಕಳದ ಅರಣ್ಯ ಕಚೇರಿಗೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅತಿಕ್ರಮಣದಾರರು ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದರ ಬಳಿಕ ಸಾರ್ವಜನಿಕ ಹಿತಾಸಕ್ತಿಗಾಗಿ ಉಚ್ಛ ನ್ಯಾಯಾಲಯ ಕಬ್ಜಾ ಸೊತ್ತನ್ನು ಅಸ್ಥಿರಗೊಳಿಸದಂತೆ ಮಧ್ಯಂತರ ಆದೇಶವನ್ನು ಹೊರಡಿಸಿತ್ತು. ಇದರ ನಂತರವೂ ತಾಲೂಕಿನಲ್ಲಿ ಅರಣ್ಯಾಧಿಕಾರಿಗಳು ತಮ್ಮ ಕೆಲಸ ಮುಂದುವರೆಸುತ್ತಿದ್ದ ಕಾರಣ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا