Urdu   /   English   /   Nawayathi

ವೆಂಕಟ್ರಮಣ ಹೆಗಡೆಮೇಲೆ ಚಿರತೆ ದಾಳಿ : ಜನತೆಯಲ್ಲಿ ಭಯದ ವಾತಾವರಣ

share with us

ಹೊನ್ನಾವರ: 16 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಕಡ್ಲೆ ಗ್ರಾಮದ ವೆಂಕಟ್ರಮಣ ಹೆಗಡೆ ಎಂಬುವವರ ಮೇಲೆ ಚಿರತೆ ಎರಗಿದಾಗ ಗಂಭೀರ ಗಾಯಗೊಂಡರು ಧೈರ್ಯದಿಂದ ಎದುರಿಸಿ ಚಿರತೆಯನ್ನು ಎದುರಿಸಿದ ಘಟನೆ ನಡೆದಿದೆ. ಇದು ಜನತೆಯಲ್ಲಿ ಸಾಮಾನ್ಯವಾಗಿಯೇ ಭಯ ಹುಟ್ಟಿಸಿದ್ದು ಸುತ್ತ ಮುತ್ತಲ ಜನತೆ ಈ ಬಗ್ಗೆ ಭಯಗೊಂಡಿದ್ದಾರೆ ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ. ಸರಿ ಸುಮಾರು ಸಂಜೆ 5-00 ಗಂಟೆಗೆ ಕಡ್ಲೆ ಗ್ರಾಮದ ತಿರುವಿನಲ್ಲಿ ತನ್ನ ಮನೆಯಿಂದ 50 ಅಡಿ ದೂರ ಬೆಟ್ಟಕ್ಕೆ ಹೋದಾಗ ವೆಂಕಟರಮಣನ ಮೇಲೆ ಚಿರತೆ ಎರಗಿದೆ ಎನ್ನಲಾಗಿದೆ. ಆತ ಚಿರತೆಯನ್ನು ಬಲಗೈಯಿಂದ ತಡೆದ. ಮತ್ತೆ ಎರಗಿದಾಗ ಎಡಗೈಯಿಂದ ತಡೆದ. ಎರಡು ಕೈ ಗಾಯವಾದಮೇಲೆ ಚಿರತೆ ಮೈಮೇಲೆ ಹಾರಿದಾಗ ನೆಲಕ್ಕೆ ಬಿದ್ದ. ಆಗ ಕೈಗೊಂದು ಕಲ್ಲು ಸಿಕ್ಕಿತು. ಬಿದ್ದ ಹೊಡೆತಕ್ಕೆ ಬಲಗೈ ಮುರಿದಿತ್ತು. ಮತ್ತೆ ಎರಗಿದಾಗ ಮುರಿದ ಕೈಯಿಂದಲೇ ಕಲ್ಲನ್ನು ಎತ್ತಿ ಚಿರತೆ ತಲೆಗೆ ಗುದ್ದಿದಾಗ ಅದು ಓಡಿಹೋಗಿದೆ ಎಂಬ ಬಗ್ಗೆ ವರದಿಯಾಗಿತ್ತು. ಈಗ ಸರಕಾರಿ ಆಸ್ಪತ್ರೆಗೆ ದಾಖಲಾಗಿ ವೆಂಕಟ್ರಮಣ ತಿಮ್ಮಣ್ಣ ಹೆಗಡೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ವರ್ಷದಿಂದ ಅಂಕೋಲಾ, ದಾಂಡೇಲಿ, ಹೊನ್ನಾವರ ಭಾಗದ ಕಿರು ಅರಣ್ಯ ಪ್ರದೇಶದ ಜನವಸತಿ ಇರುವಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ದನಗಳನ್ನು ತಿಂದಿದೆ. ಈ ಮನುಷ್ಯರ ಮೇಲೆ ಎರಗಿದೆ ಇದು ಜನತೆಯ ಭಯಕ್ಕೆ ಕಾರಣವಾಗಿದ್ದು ಇಲಾಖೆಯ ಕ್ರಮಕ್ಕಾಗಿ ಎದುರುನೋಡುವಂತಾಗಿದೆ.

ಸ, ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا