Urdu   /   English   /   Nawayathi

ನಿರ್ಭಯಾ ಅಪರಾಧಿ ತಂದೆ ಸಲ್ಲಿಸಿದ ಪರಿಷ್ಕರಣಾ ಅರ್ಜಿ ತಳ್ಳಿ ಹಾಕಿದ ಕೋರ್ಟ್​​

share with us

ನವದೆಹಲಿ: 27 ಜನುವರಿ 2020 (ಫಿಕ್ರೋಖಬರ್ ಸುದ್ದಿ) ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಮರಣ ದಂಡನೆ ವಿಧಿಸಿದ್ದು, ಈ ನಾಲ್ವರ ಪೈಕಿ ಪವನ್​ ಲಾಲ್​ ಗುಪ್ತಾ ತಂದೆ ಹೀರಾ ಲಾಲ್​ ಗುಪ್ತಾ ಈ ಹಿಂದೆ ನ್ಯಾಯಾಲಯ ತಳ್ಳಿ ಹಾಕಿದ್ದ ಪ್ರತ್ಯಕ್ಷದರ್ಶಿ ದೂರಿನ ಆದೇಶವನ್ನು ಪರಿಷ್ಕರಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಜಡ್ಜ್​​ ಕೆ ಜೈನ್ ಅರ್ಜಿಯನ್ನ ತಳ್ಳಿಹಾಕಿದ್ದಾರೆ. ಅಪರಾಧಿ ತಂದೆ ಹೀರಾ ಲಾಲ್​ ನಿರ್ಭಯ ಪ್ರಕರಣದ ಪ್ರತ್ಯಕ್ಷದರ್ಶಿ ವಿರುದ್ಧ ಈ ಹಿಂದೆ ಎಫ್ಐಆರ್​ ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ಆಕೆಯ ಸ್ನೇಹಿತ ಹಣ ಪಡೆದುಕೊಂಡು ವಿವಿಧ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾನೆ ಎಂದು ಆರೋಪಿಸಿ ಪವನ್​​ ಗುಪ್ತಾ ತಂದೆ ಹೀರಾ ಲಾಲ್ ದೂರು ದಾಖಲಿಸಿದ್ದು, ಈ ದೂರನ್ನು ಜನವರಿ 6ರಂದು ನ್ಯಾಯಾಲಯ ವಜಾಗೊಳಿಸಿತ್ತು. ಅತ್ಯಾಚಾರ ನಡೆದ ವೇಳೆ, ಸಂತ್ರಸ್ತೆಯ ಸ್ನೇಹಿತ ಹಾಗೂ ಏಕೈಕ ಪ್ರತ್ಯಕ್ಷದರ್ಶಿಗೂ ಅಪರಾಧಿ ಥಳಿಸಿ ಗಾಯಗೊಳಿಸಿದ್ದಲ್ಲದೇ ಬಸ್​ನಿಂದ ಕೆಳಕ್ಕೆ ನೂಕಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا