Urdu   /   English   /   Nawayathi

ಬಿಜೆಪಿ ನಾಯಕರಿಗೆ ನನ್ನ ಬಗ್ಗೆ ಭಯವಿದೆ: ಕೇಸರಿ ಪಡೆಗೆ ಹೆಚ್​​ಡಿಕೆ ಟಾಂಗ್​​

share with us

ಬೆಂಗಳೂರು: 23 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ. ಆದರೆ ನನ್ನ ಬಗ್ಗೆ ಅವರಿಗೆ ಭಯವಿದೆ ಎಂದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್​​ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ನಾನು ಬಲಿಕೊಡುವುದಿಲ್ಲ. ನಮ್ಮ ತಂದೆಯವರು ರಾಜಕೀಯಕ್ಕೆ ಬಂದ ದಿನದಿಂದ ಇವತ್ತಿನವರೆಗೂ ಅಧಿಕಾರಕ್ಕಾಗಿ ನಮ್ಮ ಕುಟುಂಬದವರು ಬೇರೆ ಪಕ್ಷದವರ ಮನೆಗೆ ಬಾಗಿಲಿಗೆ ಹೋಗಿಲ್ಲ ಎಂದು ಹೇಳಿದರು. ನಮ್ಮ ಪಕ್ಷದ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ. 1987ರಲ್ಲಿ ದೇವೇಗೌಡರು ಕನಕಪುರ ಮತ್ತು ಹೊಳೆನರಸೀಪುರದ ಎರಡು ಕಡೆ ಸೋತಿದ್ದರು. ಅಂದು ನಮ್ಮ ಪಕ್ಷಕ್ಕೆ ಬಂದಿದ್ದು ಕೇವಲ ಎರಡು ಸೀಟುಗಳು. ಆದರೆ ದೇವೇಗೌಡರು ತಮ್ಮ ನಿರಂತರ ಹೋರಾಟದಿಂದ ಪಕ್ಷವನ್ನು ಅಧಿಕಾರಕ್ಕೆ ತಂದರು. ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನ ತುಂಬಿದರು. ಇನ್ನು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಆಸ್ತಿ, ನಿಮ್ಮ ಪರಿಶ್ರಮದಿಂದ ಪಕ್ಷ ಬೆಳೆಯಬೇಕು ಎಂದು ಕರೆ ನೀಡಿದರು. ಪಕ್ಷ ಕರೆದಾಗ ಬಂದು ನೀವು ಸಂಘಟಿಸಬೇಕು. ಅಂದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯ ಎಂದೂ ಮನವಿ ಮಾಡಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا