Urdu   /   English   /   Nawayathi

ಶಾಲೆಗೆ ಬರದ ಕಾರಣ ವಿದ್ಯಾರ್ಥಿಗೆ ಕ್ರೂರ ಶಿಕ್ಷೆ

share with us

ದಾಂಡೇಲಿ: 21 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಜೊಯಿಡಾ ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬ ಎರಡು ದಿನಗಳಿಂದ ಶಾಲೆಗೆ ಬರದ ಕಾರಣ ಶಿಕ್ಷಕ ಶಾಲಾವರಣದ ಅಂಗಳದಲ್ಲಿ ಈತನಿಗೆ ಅರ್ಧ ಬೆತ್ತಲು ಮಾಡಿ ಕೈಕಾಲುಗಳನ್ನು ಕಟ್ಟಿ ಥಳಿಸಿದ ಕ್ರೂರ ಘಟನೆ ನಡೆದಿದೆ. ರೋಸಯ್ಯ ಪೆಂಚಯ್ಯ ರೆಡ್ಡಿಪೋಗ್ ಎಂಬ ಶಿಕ್ಷಕ ದಾಂಡೇಲಿ ಸಮೀಪವಿರುವ ಈ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಎರಡು ದಿನ ಶಾಲೆಗೆ ಬರದ ಕಾರಣ ಸೋಮವಾರದಂದು ವಿದ್ಯಾರ್ಥಿ ಜಾನು ಠಕ್ಕು ಸಿಂಗಾರೆ ಶಾಲೆಗೆ ಬಂದ ನಂತರ ಸಿಟ್ಟಿನಿಂದ ಆತನನ್ನು ಕ್ರೂರವಾಗಿ ಥಳಿಸಿದ್ದಾನೆ ಎಂದು ಹೇಳಲಾಗಿದೆ. ಶಿಕ್ಷಕ ವಿದ್ಯಾರ್ಥಿಯನ್ನು ಥಳಿಸಿದ ವೀಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಡಿಡಿಪಿಐ ಶಿಕ್ಷಕ ರೋಸಯ್ಯ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا