Urdu   /   English   /   Nawayathi

ಶಾಲಾ ವಿದ್ಯಾರ್ಥಿಗಳಿಗೆ ಬಸ್​ ನಿಲ್ಲಿಸದ್ದಕ್ಕೆ ನೂತನ ಶಾಸಕ ಗರಂ: ಬಸ್​ ಸಿಬ್ಬಂದಿಗೆ ತರಾಟೆ

share with us

ರಾಣೆಬೆನ್ನೂರು: 12 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಬಸ್ ನಿಲ್ಲಿಸದ ಕಾರಣ ಸ್ವತಃ ಶಾಸಕರೇ ಮುಂದೆ ಬಂದು ಬಸ್ ನಿಲ್ಲಿಸಿ ವಿದ್ಯಾರ್ಥಿಗಳನ್ನು ಕಳಿಸಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಗ್ರಾಮದಲ್ಲಿ ನಡೆದಿದೆ. ರಾಣೆಬೆನ್ನೂರು ಶಾಸಕ ಅರುಣ್​ ಕುಮಾರ್​ ಪೂಜಾರ್​ ಅವರು ಬಸ್ ನಿಲ್ಲಿಸಿ ಬಸ್​ನಲ್ಲಿ ಶಾಲಾ ಮಕ್ಕಳನ್ನ ಹತ್ತಿಸಿದ ನೂತನ ಶಾಸಕ. ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಸರ್ಕಾರಿ ಬಸ್​ನ ಸಿಬ್ಬಂದಿ ಮೀನಾಮೇಷ ಎಣಿಸುತ್ತಿದ್ದರು. ಇದನ್ನು ಕಂಡ ಶಾಸಕರು ಬಸ್​ ನಿಲ್ಲಿಸಿ, ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಅಲ್ಲದೆ, ಮತ್ತೊಮ್ಮೆ ಈ ರೀತಿ ನಡೆದುಕೊಳ್ಳದಂತೆ ಎಚ್ಚರಿಸಿದರು. ಇನ್ನು, ಶಾಸಕರ ಈ ಕಾರ್ಯಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಧನ್ಯವಾದವನ್ನು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا