Urdu   /   English   /   Nawayathi

ಪ್ರಚಾರದ ವೇಳೆ ಡಿಸಿಎಂ ಸವದಿ, ಅಭ್ಯರ್ಥಿ ಕುಮಟಳ್ಳಿಗೆ ಬೆವರಿಳಿಸಿದ ನೆರೆ ಸಂತ್ರಸ್ತರು

share with us

ಅಥಣಿ: 24 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಇಂದು ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಕಾರ್ಯ ಕೈಗೊಂಡಿದ್ದ ವೇಳೆ ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡಿರುವ ಘಟನೆ ತಾಲೂಕಿನ ನದಿ ಇಂಗಳಗಾಂವ್​ ನಡೆದಿದೆ. ತಾಲೂಕಿನ ನದಿ ಇಂಗಳಗಾಂವ್​ನ ಮಹಿಳೆಯರು ತರಾಟೆ ತೆಗೆದುಕೊಂಡಿದ್ದು, ಕೃಷ್ಣಾ ಪ್ರವಾಹದಲ್ಲಿ ಇಲ್ಲಿನ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದಾಗ ಬಂದು ಕಷ್ಟ ಕೇಳದೇ, ಈಗ ಮತ ಕೇಳೋಕೆ ಬಂದಿದ್ದಿರಲ್ಲ. ನಮಗೆ ಇರೋಕೆ ಮನೆಯಿಲ್ಲ, ಸಾವನ್ನಪ್ಪಿದ್ರೆ ಹುಗಿಯೋಕೆ ಸ್ಮಶಾನ ಇಲ್ಲವೆಂದು ಆಕ್ರೋಶ ಹೊರ ಹಾಕಿದ್ರು. ನಮಗೆ ಸೂಕ್ತ ಜಾಗ ನೀಡಿ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡರು. ಇದನ್ನೆಲ್ಲ ಮೂಕ ಪ್ರೇಕ್ಷಕರಾಗಿ ಆಲಿಸಿದ ಡಿಸಿಎಂ ಚುನಾವಣೆ ಮುಗಿದ ಮೇಲೆ ನಿಮ್ಮ ಊರಿಗೆ ಬರುವುದಾಗಿ ಭರವಸೆ ನೀಡಿದ್ರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا