Urdu   /   English   /   Nawayathi

ಬೆಂಗಳೂರಲ್ಲಿ ತಂದೆ - ಮಗನಿಗೆ ಪೊಲೀಸರಿಂದ ಥಳಿತ... ಮಾನವಹಕ್ಕು ಆಯೋಗದಿಂದ ದಂಡ

share with us

ಬೆಂಗಳೂರು: 21 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಗ್ಯಾಸ್ ಸ್ಟೌವ್ ರಿಪೇರಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ತಂದೆ-ಮಗನನ್ನು ಪೊಲೀಸರು ಠಾಣೆಗೆ ಕರೆದೊಯ್ದು ಹಿಗ್ಗಾಮುಗ್ಗ ಥಳಿಸಿರುವ ಪ್ರಕರಣ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದ್ದು, ಈ ಸಂಬಂಧ ದೂರಿನ ಮೇರೆಗೆ ಮಾನವಹಕ್ಕು ಆಯೋಗವು 50 ಸಾವಿರ ರೂ. ದಂಡ ವಿಧಿಸಿದೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತೀಶ್ ಹಾಗೂ ಅವರ ಮಗ ಶ್ಯಾಮ್ ಎಂಬುವರು ಗ್ಯಾಸ್ ಸ್ಟೌವ್ ರಿಪೇರಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಇವರ ಬಳಿಯಿದ್ದ ದ್ವಿಚಕ್ರ ವಾಹನಗಳ ದಾಖಲೆ ನೀಡಲು ಬಾಣಸಾವಡಿ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್ ಮುರಳಿ, ಮುಖ್ಯ ಪೇದೆ ಲೋಕೇಶ್​ ಹೇಳಿದ್ದಾರೆ. ಆದರೆ, ಒಂದು ವಾಹನದ ದಾಖಲೆ ನೀಡಿ ಮತ್ತೊಂದರ ದಾಖಲೆ ನೀಡಲು ಸತೀಶ್ ನಿರಾಕರಿಸಿದ್ದಾರೆ. ಆಗ ಅಸಮಾಧಾನಗೊಂಡು ಪೊಲೀಸರು ತಂದೆ, ಮಗನನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ‌. ನಂತರ ಹಲ್ಲೆಗೊಳಗಾದವರ ಕುಂಟುಂಬಸ್ಥರು ಮಾನವ ಹಕ್ಕು ಆಯೋಗ ಮೊರೆ ಹೋಗಿದ್ದರು. ಇನ್ನು ಮಾನವ ಹಕ್ಕು ಆಯೋಗವು ಪೊಲೀಸರ ಹಲ್ಲೆ ಖಂಡಿಸಿ 50 ಸಾವಿರ ದಂಡ ವಿಧಿಸಿದೆ. ತಾವು ಯಾವುದೇ ಕರ್ತವ್ಯ ಲೋಪವೆಸಗಿಲ್ಲ, ಮಗ ಮತ್ತು ತಂದೆ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಕ್ರಮ ಕೈಗೊಂಡಿದ್ದಾಗಿ ಪೊಲೀಸರು ಆಯೋಗಕ್ಕೆ ತಿಳಿಸಿದ್ದರು. ಆದರೆ, ಮಾನವ ಹಕ್ಕು ಆಯೋಗವು ಪೊಲೀಸರ ವಾದವನ್ನು ನಿರಾಕರಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಹಿಗ್ಗಾಮುಗ್ಗ ಥಳಿಸಿರುವುದು ಕರ್ತವ್ಯ ಲೋಪ ಎಂದು ತಿಳಿಸಿ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا