Urdu   /   English   /   Nawayathi

ಹಣ ಠೇವಣಿ ಇಟ್ಟಿದ್ದ ಗ್ರಾಹಕರಿಗೆ ದೋಖಾ: ಕಾಸು ಎಗರಿಸಿ ಪೋಸ್ಟ್​ಮ್ಯಾನ್​ ಪರಾರಿ

share with us

ಹಾಸನ: 20 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಸಾಲಗಾಮೆ ಹೋಬಳಿ ಕೇಂದ್ರದ ಅಂಚೆ ಕಚೇರಿಯಲ್ಲಿ ಹಣ ಠೇವಣಿ ಇಟ್ಟಿದ್ದ ಗ್ರಾಹಕರಿಗೆ ಅಂಚೆ ನೌಕರ ದೋಖಾ ಮಾಡಿ ಪರಾರಿಯಾಗಿದ್ದಾನೆ. ಸಾಲಗಾಮೆ ಹೋಬಳಿ ಕೇಂದ್ರದ ಅಂಚೆ ಕಚೇರಿಯಲ್ಲಿ ಕಳೆದ ಕೆಲ ವರ್ಷಗಳಿಂದ ಸ್ಥಳೀಯ ನಿವಾಸಿಗಳು 1 ಲಕ್ಷ, 2 ಲಕ್ಷ 4 ಲಕ್ಷ ಎಂಬಂತೆ ಠೇವಣಿ ಇಟ್ಟಿದ್ದಾರೆ. ಇಂತಹ 8000 ಖಾತೆಗಳು ಈ ಅಂಚೆ ಕಚೇರಿಯಲ್ಲಿವೆ. ಕಳೆದ ಹಲವಾರು ವರ್ಷಗಳಿಂದ ಚಂದ್ರು ಪೋಸ್ಟ್ ಮ್ಯಾನ್ ಆಗಿ ಇಲ್ಲಿ ಕೆಲಸ ಮಾಡುತ್ತಿದ್ದ. ಸಾಲಗಾಮೆ ಪೋಸ್ಟ್ ಆಫೀಸ್‌ನಲ್ಲಿ ಹಣ ಠೇವಣಿ ಇಟ್ಟಿದ್ದವರಿಗೆ ಪಾಸ್ ಬುಕ್ ವಿತರಿಸಿ ಎಂಟ್ರಿ ಮಾಡಿ ಕೊಡುತ್ತಿದ್ದ. ವರ್ಷಕ್ಕೆ, ಆರು ತಿಂಗಳಿಗೆ ಗ್ರಾಹಕರ ಖಾತೆಗಳಿಗೆ ಠೇವಣಿ ಇಟ್ಟಿದ್ದ ಹಣಕ್ಕೆ ಬಡ್ಡಿಯೂ ಬರುತ್ತಿತ್ತು. ಆದರೆ ಇತ್ತೀಚೆಗೆ ಕೆಲ ಗ್ರಾಹಕರು ತಮ್ಮ ಠೇವಣಿ ಹಿಂಪಡೆಯಲು ಅಂಚೆ ಕಚೇರಿಗೆ ಹೋಗಿ ವಿಚಾರಿಸಿದ ವೇಳೆ ಜನರ ನಂಬಿಕೆ ಗಿಟ್ಟಿಸಿಕೊಂಡು ಚಂದ್ರು ಮೋಸವೆಸಗಿರೋದು ಬಯಲಾಗಿದೆ. ಇದರಿಂದ ಗಾಬರಿ ಬಿದ್ದ ಹಲವರು ಅಂಚೆ ಕಚೇರಿಗೆ ಬರುತ್ತಿದ್ದು ಸುಮಾರು 8ಕ್ಕೂ ಹೆಚ್ಚು ಗ್ರಾಹಕರಿಗೆ ಹೀಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಚಂದ್ರು ತಲೆಮರೆಸಿಕೊಂಡಿದ್ದು, ಸುಮಾರು 30 ಲಕ್ಷಕ್ಕೂ ಹೆಚ್ಚು ಠೇವಣಿ ಹಣವನ್ನು ವಂಚಿಸಿದ್ದಾನೆ ಎನ್ನಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا