Urdu   /   English   /   Nawayathi

ಸಂಸಾರದಲ್ಲಿ ಹುಳಿ ಹಿಂಡಿದ ಪಾದ್ರಿಗೆ ಧರ್ಮದೇಟು....ವಿಡಿಯೋ ವೈರಲ್

share with us

ಬೆಂಗಳೂರು: 12 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಪಾದ್ರಿಯೊಬ್ಬನಿಗೆ ಧರ್ಮದೇಟು ನೀಡಿರುವ ಘಟನೆ ಸಿಲಿಕಾನ್ ಸಿಟಿ ಯಲ್ಲಿ ನಡೆದಿದೆ. ದೀಪಾ ಕಾಂಪ್ಲೆಕ್ಸ್ ಬಳಿ ಇರುವ ಎಸ್​​ಎನ್ ಕಾಂಪ್ಲೆಕ್ಸ್ ಬಳಿ ಹ್ಯಾಂಡ್ರಿ ರಿಚರ್ಡ್ ಎಂಬ ಪಾದ್ರಿ ವಾಸವಿದ್ದು, ಕಾಂಪ್ಲೆಕ್ಸ್ ನಲ್ಲಿ ಜನರಿಗೆ ಪ್ರವಚನ ಕೂಡ ಮಾಡ್ತಿದ್ದ ಹೀಗಾಗಿ ಇಲ್ಲಿಗೆ ಹಲವಾರು ಮಂದಿ ಬರ್ತಿದ್ರು. ಇದನ್ನೆ ಬಂಡವಾಳವಾಗಿಸಿಕೊಂಡ ಪಾದ್ರಿ ಅಲ್ಲಿ ಬರುವ ಜನರಿಗೆ ಕೌಟುಂಬಿಕ ಕಲಹಕ್ಕೆ ಪರಿಹಾರ ಹೇಳ್ತಿನಿ ಅಂತಾ ಮೊದಲು ಮಾತುಕತೆಗೆ ಇಳಿದು ನಂತ್ರ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡ್ತಿದ್ದ ಎಂದು ಆರೋಪ ಕೇಳಿ ಬಂದಿದೆ. ಕೆಲವರು ಪಾದ್ರಿ ಮಾತು ನಂಬಿ ಸಾವಿರಾರು ರೂಪಾಯಿ ಹಣ ನೀಡಿದ್ದಾರೆ ಎನ್ನಲಾಗಿದೆ. ಅಷ್ಟು‌ ಮಾತ್ರವಲ್ಲದೇ ಫಾದರ್ ಸಂಸಾರ‌ ಹಾಳು ಮಾಡಿಕೊಂಡಿರುವ ಪ್ರಸಂಗ ಕೂಡ ನಡೆದಿದೆ ಎಂದು ಜನ ಆರೋಪಿಸಿದ್ದಾರೆ. ಹೀಗಾಗಿ ಇಂದು ಕಾಂಪ್ಲೆಕ್ಸ್​​​ಗೆ ನುಗ್ಗಿ ಪಾದ್ರಿಗೆ ಧರ್ಮದೇಟು ನೀಡಿದ್ದಾರೆ. ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪಾದ್ರಿಯನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ಗಲಾಟೆ ಮಾಡಿದವರನ್ನು ಠಾಣೆಗೆ ಕರೆದೊಯ್ದ ವಿಚಾರಣೆ ನಡೆಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا