Urdu   /   English   /   Nawayathi

ಕಾಲೇಜಿನಿಂದ ಅಮಾನತು ಶಿಕ್ಷೆ: ಮನನೊಂದ ವಿದ್ಯಾರ್ಥಿ ಕಟ್ಟಡದಿಂದ ಹಾರಿ ಆತ್ಮಹತ್ಯೆ

share with us

ಆನೇಕಲ್: 21 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಅಮಾನತು ಮಾಡಿದ್ದಕ್ಕಾಗಿ ಮನನೊಂದ ವಿದ್ಯಾರ್ಥಿವೋರ್ವ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು-ಹೊಸೂರು ರಸ್ತೆಯಲ್ಲಿರುವ ಕಸವನಹಳ್ಳಿಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಹರ್ಷ‌ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಈತ ಎಲೆಕ್ಟ್ರಾನಿಕ್​ ಆ್ಯಂಡ್​ ಕಮ್ಯುನಿಕೇಷನ್​ ವಿಭಾಗದಲ್ಲಿ 4ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತ ಹರ್ಷ ಕಾಲೇಜು ಹಾಸ್ಟೆಲ್​ನಲ್ಲಿ ಊಟ ತಿಂಡಿ ಸರಿ ಇಲ್ಲ ಎಂದು ಈ ಹಿಂದೆ ಪ್ರತಿಭಟಿಸಿದ್ದ ಎನ್ನಲಾಗ್ತಿದೆ. ಈ ಕಾರಣದಿಂದ ಕಾಲೇಜು ಆಡಳಿತ ಮಂಡಳಿ, ಹರ್ಷ ಸೇರಿದಂತೆ 20 ವಿದ್ಯಾರ್ಥಿಗಳನ್ನು ಅಮಾನತು ಮಾಡಿತ್ತು. ‌ಈ ಮಧ್ಯೆ ಹರ್ಷಗೆ ಕ್ಯಾಂಪಸ್ ಸೆಲೆಕ್ಷನ್​ನಲ್ಲಿ ಕೆಲಸ ದೊರೆತಿತ್ತು. ಆದ್ರೆ ಆಫರ್​ ಲೆಟರ್​ನ್ನು ಕಾಲೇಜು ಆಡಳಿತ ಮಂಡಳಿಯವರು ಹರಿದು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا