Urdu   /   English   /   Nawayathi

ಹುಬ್ಬಳ್ಳಿ ಬಾಂಬ್ ಸ್ಫೋಟ ಪ್ರಕರಣ.. ಮಹಾ ಚುನಾವಣೆಗೂ ಲಿಂಕ್‌ ಇರುವ ಅನುಮಾನ?

share with us

ಹುಬ್ಬಳ್ಳಿ: 21 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹಾರಾಷ್ಟ್ರ ಚುನಾವಣೆಗೂ ‌ಲಿಂಕ್‌ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಇಂದು ಮಧ್ಯಾಹ್ನ ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸ್​​ಪ್ರೆಸ್ ರೈಲಿನಲ್ಲಿ 10ಕ್ಕೂ ಹೆಚ್ಚು ಅನುಮಾನಾಸ್ಪದ ಬಾಕ್ಸ್​​ಗಳು ಪತ್ತೆಯಾಗಿದ್ದವು. ಅದರಲ್ಲಿ ಒಂದು ಬಾಕ್ಸ್​​ನನ್ನು ಸಿಆರ್​ಪಿಎಫ್ ಪೇದೆಯೊಬ್ಬರು ಹುಸೇನ್ ಎಂಬ ವ್ಯಕ್ತಿಯಿಂದ ಈ ಬಾಕ್ಸ್​ ತೆರೆಸಿದ್ರು ಎನ್ನಲಾಗಿದೆ. ಆಗ ಬಾಂಬ್ ಸ್ಫೋಟಗೊಂಡು ಯುವಕನ ಕೈ ಛಿದ್ರಗೊಂಡಿದೆ. ಆದ್ರೆ, ಬಾಕ್ಸ್​​ನನ್ನು ತೆರೆದು‌ ನೋಡಿದಾಗ ಅದರ ಒಳಗಿರುವ ಸ್ಫೋಟಕ‌ ವಸ್ತು ತುಂಬಿದ ಬಕೆಟ್ ಮೇಲೆ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾದೇಶಿಕ ಪಕ್ಷದ ಹೆಸರನ್ನು ಕೆಂಪು ಅಕ್ಷರದಲ್ಲಿ ತಮಿಳು ಹಾಗೂ ಇಂಗ್ಲಿಷ್​​​ ಭಾಷೆಯಲ್ಲಿ ಬರೆಯಲಾಗಿದೆ. ಅಲ್ಲದೆ ಕೊಲ್ಲಾಪುರದ ಪ್ರಾದೇಶಿಕ ಪಕ್ಷಕ್ಕೆ ಸೇರಿದ ಒಬ್ಬ ವ್ಯಕ್ತಿಯ ಹೆಸರು ಕೂಡಾ ಇದೆ. ಹೀಗಾಗಿ ಈ ಸ್ಫೋಟ ಪ್ರಕರಣಕ್ಕೂ ಇಂದು‌ ಮಹಾರಾಷ್ಟ್ರದಲ್ಲಿ ‌ನಡೆದ ಚುನಾವಣೆಗೂ‌ ಲಿಂಕ್‌ ಇರುವ ಶಂಕೆ‌ ವ್ಯಕ್ತವಾಗಿದೆ. ಸದ್ಯಕ್ಕೆ 10ಕ್ಕೂ ಹೆಚ್ಚು ಬಾಕ್ಸ್​​ಗಳನ್ನು ಬಯಲು ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಇರಿಸಿದ್ದು, ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಬಂದ ಮೇಲೆ ಇದರ ಸತ್ಯಾಸತ್ಯತೆ ತಿಳಿಯಲಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا