Urdu   /   English   /   Nawayathi

ರೈತರ ಸಾಲ ಮನ್ನಾ ಮಾಡದಿರುವುದೇ ಆರ್ಥಿಕತೆ ಹಿಂದುಳಿಯಲು ಕಾರಣವಂತೆ: ರಾಹುಲ್​ ಗಾಂಧಿ!

share with us

ನವದೆಹಲಿ: 20 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) 2014ರ ನಂತರ ಭಾರತದ ಆರ್ಥಿಕತೆ ಇಷ್ಟೊಂದು ಹಿಂದುಳಿಯಲು ಏನು ಕಾರಣ ಎಂಬುದರ ಕುರಿತು ರಾಹುಲ್​ ಗಾಂಧಿ ಮಾತನಾಡಿದ್ದಾರೆ. ತಾವು ಅಮೆರಿಕದ ಫೇಮಸ್​ ಅರ್ಥಶಾಸ್ತ್ರಜ್ಞರ ಬಳಿ ಇದರ ಬಗ್ಗೆ ಕೇಳಿದಾಗ, ಅವರು ಮಾತು ಕೇಳಿ ನನಗೂ ಆಶ್ಚರ್ಯವಾಯ್ತು. 2004-2014ರಲ್ಲಿ ನರೇಗಾ ಹಾಗೂ ರೈತರ ಸಾಲ ಮನ್ನಾ ಮಾಡಿದ್ದಕ್ಕಾಗಿ ದೇಶದ ಆರ್ಥಿಕತೆ ಅತಿ ವೇಗವಾಗಿ ಅಭಿವೃದ್ಧಿ ಹೊಂದಿತ್ತು. ಇದೀಗ ಅವುಗಳಿಗೆ ಕತ್ತರಿ ಹಾಕಿದ್ದಕ್ಕಾಗಿ ಭಾರತದ ಆರ್ಥಿಕತೆ ತೀರಾ ಹಿಂದುಳಿದಿದೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆ ರಂಗೇರಿದ್ದು, ಇದೀಗ ರಾಹುಲ್​ ಗಾಂಧಿ ಕಣಕ್ಕಿಳಿದು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಈ ಮಾತು ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا